Sirach - Chapter 48
Holy Bible

1 : ಎಲೀಯನು ಆಮೇಲೆ ಪ್ರವಾದಿ ಎಲೀಯನೆದ್ದನು ಬೆಂಕಿಯಂತೆ ಉರಿಯಿತವನ ನುಡಿ ಪಂಜಿನಂತೆ.
2 : ಕ್ಷಾಮವನ್ನು ಬರಮಾಡಿದನಿವನು ಜನರ ಮೇಲೆ ಅವರನ್ನು ಕುಂದಿಸಿದನು ತನ್ನ ರೋಷದಿಂದಲೆ.
3 : ಆಕಾಶವನ್ನೇ ಮುಚ್ಚಿಬಿಟ್ಟನು ಸರ್ವೇಶ್ವರನ ಹೆಸರಿನಲ್ಲಿ ಬೆಂಕಿಯಿಳಿಯುವಂತೆ ಮಾಡಿದನು ಮೂರುಸಾರಿ.
4 : ಎಲೈ ಎಲೀಯನೇ, ಮಹತ್ಕಾರ್ಯಗಳಲ್ಲಿ ನೀನು ಎಷ್ಟು ಘನವಂತನಾಗಿದ್ದೆ ! ನಿನ್ನಂತೆ ಹೆಚ್ಚಳಪಡುವವರು ಯಾರಿದ್ದಾರೆ?
5 : ಸತ್ತವನನ್ನು ನೀನೆಬ್ಬಿಸಿದೆ ಮರಣದಿಂದ, ಪಾತಾಳದಿಂದ ಇದು ಸಾಧ್ಯವಾಯಿತು ಮಹೋನ್ನತನ ವಾಕ್ಯ ಶಕ್ತಿಯಿಂದ.
6 : ಅರಸುಗಳನ್ನು ನಾಶನಕ್ಕೆ ಗುರಿಮಾಡಿದವನು ನೀನು ಗಣ್ಯವ್ಯಕ್ತಿಗಳನ್ನು ಮಂಚದಿಂದ ಇಳಿಸಿದವನು ನೀನು.
7 : ಸೀನಾಯಿನಲ್ಲಿ ಗದರಿಸಿಕೊಂಡವನು ನೀನು ಹೋರೇಬಿನಲ್ಲಿ ಮುಯ್ಯಿತೀರಿಸುವ ನಿರ್ಣಯ ಕೇಳಿಸಿಕೊಂಡವನು ನೀನು.
8 : ಪ್ರತೀಕಾರ ಮಾಡುವುದಕ್ಕೆ ಅರಸರನ್ನು, ನಿನ್ನಾನಂತರ ಇರಬೇಕಾದ ಪ್ರವಾದಿಯನ್ನು ಅಭಿಷೇಕಿಸಿದವನು ನೀನು.
9 : ನೀ ಒಯ್ಯಲ್ಪಟ್ಟೆ ಬೆಂಕಿಯ ಬಿರುಗಾಳಿಯಲ್ಲಿ ಅಗ್ನಿಮಯ ಕುದುರೆಗಳೆಳೆದ ರಥದಲ್ಲಿ.
10 : ಕೋಪ ರೌದ್ರಕ್ಕೇರುವುದಕ್ಕೆ ಮುಂಚೆ ಅದನ್ನು ಶಾಂತಪಡಿಸುವುದಕ್ಕಾಗಿ ತಂದೆಯ ಹೃದಯವನ್ನು ಮಗನ ಕಡೆಗೆ ತಿರುಗಿಸುವುದಕ್ಕಾಗಿ ಇಸ್ರಯೇಲಿನ ಕುಲಗಳನ್ನು ಯಥಾಸ್ಥಿತಿಗೆ ತರುವುದಕ್ಕಾಗಿ ತಕ್ಕಕಾಲದಲ್ಲಿ ಗದರಿಸುವಾತ ನೀನೆಂದು ಬರೆದಿದೆ ನಿನ್ನ ವಿಷಯವಾಗಿ.
11 : ನಿನ್ನನು ನೋಡುವವರು ಧನ್ಯರು ಪ್ರೀತಿಯಿಂದ ನಿಧನರಾದವರು ಧನ್ಯರು ! ಕಾರಣ, ನಾವು ಸಹ ನಿಜವಾಗಿ ಜೀವಿಸುವೆವು.
12 : ಎಲೀಷ ಸುಳಿಗಾಳಿಯಿಂದ ಆವರಿಸಲ್ಪಟ್ಟವನು ಎಲೀಯನು ಅವನ ಆತ್ಮದಿಂದ ತುಂಬಿಕೊಂಡವನು ಎಲೀಷನು. ಇವನು ತನ್ನ ಜೀವನದಲ್ಲಿ ಜಗ್ಗಲಿಲ್ಲ ಯಾವ ಅರಸನ ಬೆದರಿಕೆಗು ಇವನನ್ನು ಅಧೀನದಲ್ಲಿಟ್ಟುಕೊಳ್ಳುವ ಶಕ್ತಿ ಇರಲಿಲ್ಲ ಯಾರಿಗು.
13 : ಇವನು ಸೋಲಲಿಲ್ಲ ಯಾವ ಮಾತಿಗು ಇವನ ದೇಹ ಪ್ರವಾದಿಸಿತು ಸತ್ತ ಮೇಲೂ.
14 : ಜೀವಮಾನಕಾಲದಲ್ಲಿ ಎಸಗಿದನು ಮಹತ್ಕಾರ್ಯಗಳನ್ನು ಸತ್ತಮೇಲೂ ಅವನ ಕಾರ್ಯಗಳು ಅಗಾಧವಾಗಿದ್ದವು.
15 : ಜನರು ಪಶ್ಚಾತ್ತಾಪಪಡಲಿಲ್ಲ ನಾಡಿನಿಂದ ಕೊಳ್ಳೆಯಾಗಿ ಒಯ್ಯಲ್ಪಡುವ ವರೆಗೂ ಪಾಪಗಳನ್ನು ಬಿಡಲಿಲ್ಲ. ಹೀಗೆ ಚದರಿಹೋದರು ಭೂಮಿಯ ಮೇಲೆಲ್ಲಾ ಆಗ ಉಳಿದುಕೊಂಡವರು ಕೆಲವರು ಮಾತ್ರ ದಾವೀದನ ಗೋತ್ರದ ಒಬ್ಬ ಒಡೆಯನು ಮಾತ್ರ;
16 : ಇವರಲ್ಲಿ ಕೆಲವರು ನಡೆದುಕೊಂಡರು ದೇವರಿಗೆ ಮೆಚ್ಚಿಕೆಯಾಗಿ ಇನ್ನು ಕೆಲವರು ಕಟ್ಟಿಕೊಂಡರು ಪಾಪಗಳನ್ನು ಹೆಚ್ಚು ಹೆಚ್ಚಾಗಿ.
17 : ಹಿಜ್ಕೀಯ ಹಿಜ್ಕೀಯನು ಭದ್ರಪಡಿಸಿದನು ಪಟ್ಟಣವನ್ನು ಅದರೊಳಗೆ ನೀರನ್ನು ತರುವ ವ್ಯವಸ್ಥೆ ಮಾಡಿದನು ಕಬ್ಬಿಣದ ಹಾರೆಯಿಂದ ತೋಡಿಸಿದನು ಬಂಡೆಯನ್ನು ನೀರಿಗಾಗಿ ಕಟ್ಟಿಸಿದನು ಬಾವಿಗಳನ್ನು.
18 : ಸನ್ಹೇರೀಬನು ಬಂದನು ಇವನ ಕಾಲದಲ್ಲಿ ಆದರೆ ತಾನು ಹಿಂದೆ ಉಳಿದು, ರಬ್ಷಾಕೆಯನ್ನು ಕಳುಹಿಸಿದನು ಮುಂದಕೆ: ಸಿಯೋನಿನ ವಿರುದ್ಧ ಕೈಯೆತ್ತಿದವನು ಇವನೇ ಸೊಕ್ಕಿನಿಂದ ಅನೇಕ ವಿಷಯಗಳ ಬಗ್ಗೆ ಕೊಚ್ಚಿಕೊಂಡವನು ಇವನೇ.
19 : ಜನರ ಹೃದಯಗಳೂ ಕೈಗಳೂ ನಡುಗಿದವು ಆಗ ಹೆರಿಗೆಯ ವೇದನೆಯಂತೆ ಯಾತನೆಗೆ ಒಳಗಾದರು, ಅಕಟಾ !
20 : ದಯಾಮಯ ಸರ್ವೇಶ್ವರನಿಗೆ ಕೈಯೆತ್ತಿ ಮೊರೆಯಿಟ್ಟರು ಪರಿಶುದ್ಧ ಪ್ರಭು ಪರಲೋಕದಿಂದ ಆ ಪ್ರಾರ್ಥನೆಯನ್ನಾಲಿಸಿದನು ಯೆಶಾಯನ ಮುಖಾಂತರ ಅವರನ್ನು ಕಾಪಾಡಿದನು.
21 : ಸರ್ವೇಶ್ವರನು ಅಸ್ಸೀರಿಯರ ಪಾಳೆಯವನ್ನು ತಾಕಿದನು ಆತನ ದೂತ ಅವರನ್ನು ಸಂಪೂರ್ಣವಾಗಿ ನಾಶಪಡಿಸಿದನು.
22 : ಯೆಶಾಯ ಹಿಜ್ಕೀಯನು ನಡೆದನು ದೇವರಿಗೆ ಮೆಚ್ಚಿಗೆಯಾಗಿ ತನ್ನ ಪೂರ್ವಜ ದಾವೀದನ ಮಾರ್ಗದಲ್ಲಿ ನಡೆದನು ಸ್ಥಿರವಾಗಿ ದರ್ಶನಗಳಲ್ಲಿ ಮಹಾತ್ಮ, ನಂಬಿಗಸ್ಥನಾಗಿ ಪ್ರವಾದಿ ಯೆಶಾಯನ ಅಪ್ಪಣೆಗನುಸಾರವಾಗಿ.
23 : ಈ ಯೆಶಾಯನ ಕಾಲದಲ್ಲೆ ಸೂರ್ಯನು ಹಿಂದಕ್ಕೆ ಸರಿದುದು ಇವನೇ ಅರಸನ ಜೀವನಾವಧಿ ಹೆಚ್ಚುವಂತೆ ಮಾಡಿದವನು.
24 : ತನ್ನಲ್ಲಿದ್ದ ಶಕ್ತಿಯುತ ಚೈತನ್ಯದ ಮುಖಾಂತರ ಕೊನೆಯಲ್ಲಿ ಸಂಭವಿಸಲಿರುವುದನ್ನು ಕಂಡುಕೊಂಡ ಸಿಯೋನಿನಲ್ಲಿ ಗೋಳಾಡುತ್ತಿದ್ದವರನ್ನು ಸಂತೈಸಿದ.
25 : ಕಾಲಾಂತ್ಯದವರೆಗೆ ನೆರವೇರಬೇಕಾದವು ಗಳನ್ನೂ ನಿಗೂಢ ವಿಷಯಗಳನ್ನೂ ಅವು ತಲೆದೋರುವುದಕೆ ಮುಂಚಿತವಾಗಿಯೆ ಈತ ಪ್ರಕಟಿಸಿದನು.

Holydivine