Sirach - Chapter 21
Holy Bible

1 : ಪಾಪಾಕ್ರಮಗಳು ಮಗನೇ, ಪಾಪಮಾಡಿರುವೆಯೋ? ಪುನಃ ಮಾಡಬೇಡ; ಹಳೆಯ ಪಾಪಗಳಿಗಾಗಿ ಕ್ಷಮೆ ಬೇಡಿಕೊ.
2 : ಪಾಪದ ಬಳಿಯಿಂದ ಓಡಿಬಿಡು, ಹಾವಿಗೆ ಹೆದರಿ ಓಡುವವನಂತೆ ಕಚ್ಚುವುದದು, ಅದರ ಸಮೀಪಕ್ಕೆ ಹೋದರೆ. ಅದರ ಹಲ್ಲುಗಳು ಕೇಸರಿಯ ಕೋರೆಯಂತಿವೆ ಮಾನವನ ಪ್ರಾಣವನ್ನು ತೆಗೆದುಬಿಡುತ್ತವೆ.
3 : ಎಲ್ಲಾ ಅಕ್ರಮ ಇಬ್ಬಾಯ ಕತ್ತಿಗೆ ಸಮಾನ ಮಾಯುವುದಿಲ್ಲ ಅದರ ಹೊಡೆತದಿಂದಾದ ಗಾಯ.
4 : ಸಿರಿಸಂಪತ್ತನ್ನು ಹಾಳುಮಾಡುತ್ತವೆ ಭಯಬಲಾತ್ಕಾರಗಳು ಅದರಂತೆಯೇ ಹಾಳಾಗುತ್ತವೆ ಗರ್ವಿಷ್ಠನ ಮನೆ-ಮಠಗಳು.
5 : ದೇವರ ಕಿವಿಗೆ ಮುಟ್ಟುವುದು ಬಡವನ ಬೇಡಿಕೆ ಕೂಡಲೇ ಉತ್ತರ ಬರುವುದು ಅದಕ್ಕೆ.
6 : ಬುದ್ಧಿಯ ಮಾತುಗಳನ್ನು ಹೀನೈಸುವವನು ಇರುವುದು ಪಾಪಮಾರ್ಗದಲ್ಲಿ ದೇವರಿಗೆ ಅಂಜುವವನು ಆತನ ಕಡೆ ತಿರುಗಿಕೊಳ್ಳುವನು ಹೃದಯದಲ್ಲಿ.
7 : ಮಾತಿನ ಮಲ್ಲನನ್ನು ದೂರದಿಂದಲೇ ಗುರುತಿಸುವುದು ಕಷ್ಟವಲ್ಲ ಆದರೆ ಅವನು ಯಾವಾಗ ಜಾರಿಬೀಳುವನೆಂದು ವಿವೇಕಿಯೇ ಬಲ್ಲ.
8 : ಪರರ ದುಡ್ಡಿನಿಂದ ತನ್ನ ಮನೆ ಕಟ್ಟಿಕೊಳ್ಳುವವನು ತನ್ನ ಸಮಾಧಿಕಟ್ಟಲು ಕಲ್ಲನು ಕೂಡಿಸುವಂತಿರುವನು.
9 : ದುಷ್ಟರ ಸಂತೆ ಸಣಬಿನ ಸಂತೆ ಉರಿಯುವ ಬೆಂಕಿ ಅವರ ಅಂತ್ಯೆ.
10 : ಪಾಪಾತ್ಮರ ಮಾರ್ಗ ಕಲ್ಲು ಹಾಸಿ ಸರಾಗ ಮಾಡಿದ ಹೆದ್ದಾರಿ ಆದರೆ ಅದರ ಕೊನೆಯಲ್ಲಿರುವುದು ಪಾತಾಳದ ಗುಂಡಿ.
11 : ಸುಜ್ಞಾನಿಯೂ ಅಜ್ಞಾನಿಯೂ ಧರ್ಮಶಾಸ್ತ್ರವನ್ನು ಅನುಸರಿಸುವವನಿಗೆ ಆಲೋಚನೆಗಳು ಹತೋಟಿಯಲ್ಲಿರುವುವು ದೇವರಲ್ಲಿ ಭಯಭಕ್ತಿಯು ಸುಜ್ಞಾನದ ಸಂಪೂರ್ಣತೆಯು.
12 : ಸುಶಿಕ್ಷಿತನಾಗಲು ಸಾಧ್ಯವಿಲ್ಲ ಚಾತುರ್ಯವಿಲ್ಲದೆ ಆದರೆ ನಿಷ್ಠೂರತನವನ್ನು ಹೆಚ್ಚಿಸುವ ಚಾತುರವೊಂದಿದೆ.
13 : ಜಾಣನ ಜ್ಞಾನ ವೃದ್ಧಿಯಾಗುವುದು ಪ್ರವಾಹದಂತೆ ಅವನ ಬುದ್ಧಿ ಉಕ್ಕುವುದು ಜೀವದ ಬುಗ್ಗೆಯಂತೆ.
14 : ಒಡಕು ಮಡಕೆಯಂತಿದೆ ಮಂದಮತಿಯ ಅಂತರಂಗ ಅವನಲ್ಲಿ ಜ್ಞಾನವು ನಿಲ್ಲುವುದು ಅಸಾಧ್ಯ.
15 : ಜಾಣ್ಮೆಯ ನುಡಿ ಕೇಳಿದರೆ ಜಾಣನು ತಲೆದೂಗುವನು; ಕೂಡಿಸಿಕೊಳ್ಳುವನು, ಅದನ್ನೇ ಭಂಡನು ಕೇಳಿದರೆ, ಹಿಗ್ಗುವುದಿಲ್ಲ; ಅದನ್ನು ಹಿಂದೂಡುವನು.
16 : ಮೂರ್ಖನ ಮಾತು ಪ್ರಯಾಣದಲ್ಲಿ ಹೊತ್ತ ಹೊರೆಯಂತೆ ಜಾಣನ ಬಾಯಲಿ ಸಿಗುವುದಾದರೋ ಅಮೃತದಂತೆ.
17 : ಕೂಡಿದ ಸಭೆಯಲ್ಲಿ ವಿವೇಕಿ ಆಡುವ ಮಾತನ್ನು ಕೇಳಲು ಜನರು ಆತುರದಿಂದಿರುತ್ತಾರೆ. ಅವನ ನುಡಿಗಳನ್ನು ಮನದಲ್ಲಿಟ್ಟುಕೊಂಡು ಮೆಲಕು ಹಾಕುತ್ತಾರೆ.
18 : ಮೂರ್ಖನಿಗೆ ಜ್ಞಾನ ಹಾಳುಮನೆಯಂತೆ ಬುದ್ಧಿಹೀನನ ಜ್ಞಾನ ಅರ್ಥವಿಲ್ಲದ ಮಾತಿನಂತೆ.
19 : ಬುದ್ಧಿಹೀನನಿಗೆ ಶಿಕ್ಷಣ ಕಾಲಿಗೆ ಹಾಕಿದ ಸಂಕೋಲೆಯಂತೆ ಕೈಗೆ ಬಿಗಿದ ಬೇಡಿಯಂತೆ.
20 : ಮೂರ್ಖನು ಕೇಕೆ ಹಾಕಿ ನಗುವನು ದೊಡ್ಡದನಿ ಮಾಡಿ ಜಾಣನು ಅಪರೂಪಕ್ಕೆ ಮುಗುಳ್ನಗೆ ಬೀರುವನು ಹಸನ್ಮುಖನಾಗಿ.
21 : ವಿವೇಕಿಗೆ ಶಿಕ್ಷಣ ಬಂಗಾರದ ಆಭರಣ ಅಂತೆಯೆ ಬಲದೋಳಿನ ಕಂಕಣ.
22 : ಮೂರ್ಖನ ಪಾದಗಳು ಕೂಡಲೆ ಸೇರುವುವು ನೆರೆಮನೆಗೆ ಅನುಭವಿಯಾದರೋ ನಾಚಿಕೊಳ್ಳುವನು ಹಾಗೆ ಮಾಡುವುದಕ್ಕೆ.
23 : ತಿಳಿಗೇಡಿ ಇಣಿಕಿನೋಡುವನು ನೆರೆಮನೆಯ ಬಾಗಿಲಲ್ಲಿ ಸುಸಂಸ್ಕøತನು ನಿಂತುಕೊಳ್ಳುವನು ಬಾಗಿಲ ಹೊರಗಡೆಯಲ್ಲಿ.
24 : ಪರರ ಬಾಗಿಲಲಿ ನಿಂತು ಕಿವಿಗೊಡುವುದು ಅವಿವೇಕತನ ವಿವೇಕಿಗೆ ಇಂಥ ನಡತೆ ನಾಚಿಕೆಗೆ ಕಾರಣ.
25 : ಅವಿವೇಕಿಗಳ ಹರಟೆ ಅಸಂಗತ ಮಾತಿನಂತೆ ಆದರೆ ವಿವೇಕಿಗಳ ಮಾತು ತಕ್ಕಡಿಯಲಿ ತೂಗಿಟ್ಟಂತೆ.
26 : ಮೂರ್ಖರ ಹೃದಯ ಅವರ ಬಾಯಲ್ಲಿ ಬುದ್ಧಿವಂತರ ಬಾಯಿ ಅವರ ಹೃದಯದಲ್ಲಿ.
27 : ಅಧರ್ಮಿ ಸೈತಾನನನ್ನು ಶಪಿಸುವಾಗ ತನ್ನನ್ನೇ ಶಪಿಸಿಕೊಳ್ಳುತ್ತಾನಲ್ಲ!
28 : ಕಿವಿಯೂದುವವನ ಆತ್ಮ ಮಲಿನ ಅವನೆಲ್ಲರಿಗೂ ಅಸಹ್ಯ.

Holydivine