Sirach - Chapter 44
Holy Bible

1 : ಪೂರ್ವಜರ ಸ್ತುತಿ ವಂದನೆ ಸಲ್ಲಿಸೋಣ ನಾವೀಗ ಪ್ರಸಿದ್ಧ ಪುರುಷರಿಗೆ ನಮ್ಮನ್ನು ಪಡೆದ ನಮ್ಮ ಕುಲದ ಮೂಲಪಿತೃಗಳಿಗೆ.
2 : ಪ್ರಕಟಿಸಿಹನು ಸರ್ವೇಶ್ವರ ತನ್ನ ಮಹಾಮಹಿಮೆಯನ್ನು ತೋರ್ಪಡಿಸಿಹನು ಮೊದಲಿಗಿಂತಲೂ ತನ್ನ ಮಹಾಶಕ್ತಿಯನು.
3 : ತಮ್ಮ ತಮ್ಮ ರಾಜ್ಯಗಳನು ಆಳಿದವರು, ತಮ್ಮ ಶಕ್ತಿಯಿಂದ ಹೆಸರು ಗಳಿಸಿಕೊಂಡವರು, ತಮ್ಮ ತಿಳುವಳಿಕೆಯಿಂದ ಆಲೋಚನೆ ನೀಡಿದವರು, ಪ್ರವಚನಗಳಿಂದ ಸಂದೇಶವನು ಸಾರಿದವರು;
4 : ತಮ್ಮ ಸಲಹೆಗಳಿಂದ ಜನಾಂಗಕ್ಕೆ ಮುಂದಾಳಾದವರು, ತಮ್ಮ ತಿಳುವಳಿಕೆಯಿಂದ ಜನಾಂಗಕ್ಕೆ ವಿದ್ಯಾವಂತರಾದವರು, (ಜ್ಞಾನಮಯವಾಗಿತ್ತು ಇವರು ನೀಡಿದ ಬೋಧನೆಯು)
5 : ರಾಗಗಳನ್ನು ಕಂಡು ಹಿಡಿದವರು ಗೀತೆಗಳನ್ನು ರಚಿಸಿ ಕಲಿಸಿದರು.
6 : ತಮ್ಮ ನಿವಾಸಗಳಲ್ಲಿ ಶಾಂತಿಯಿಂದ ಬಾಳಿದ ಸಮರ್ಥ ಶ್ರೀಮಂತರು.
7 : ಇವರೆಲ್ಲರು ತಮ್ಮ ಜೀವನಕಾಲದಲ್ಲಿ ಗೌರವಕ್ಕೆ ಪಾತ್ರರಾಗಿದ್ದರು; ಆಯಾಕಾಲದಲ್ಲಿ ಭೂಷಣಪ್ರಾಯರಾಗಿ ಹೋದರು.
8 : ಇವರಲಿ ಕೆಲವರು ತಮ್ಮ ಹೆಸರುಗಳನ್ನು ಕೆತ್ತಿ ಹೋದರು ಆ ಹೆಸರುಗಳು ಅವರ ಕೀರ್ತಿಯನ್ನು ಸಾರುತ್ತಿರುವುವು.
9 : ಇನ್ನು ಕೆಲವರು ಯಾವ ಸ್ಮಾರಕವೂ ಇಲ್ಲದೆ ಎಂದೂ ಇಲ್ಲದ್ದವರಂತೆ ಗತಿಸಿಹೋದರು ಹುಟ್ಟಲಿಲ್ಲವೇನೋ ಎಂಬಂತೆ ಕಣ್ಮರೆಯಾಗಿ ಹೋದರು ಅವರ ನಂತರ ಅವರ ಮಕ್ಕಳು ಸಹ ಅವರಂತೆ ಹೋಗಿಬಿಟ್ಟರು.
10 : ಆದರೆ ಅವರು ದಯಾಳುಗಳಾಗಿದ್ದರು ಮರೆತು ಹೋಗಲಿಲ್ಲ ಅವರ ಸತ್ಕಾರ್ಯಗಳು.
11 : ಒಳ್ಳೆಯ ಸೊತ್ತು ಸದಾ ಉಳಿಯುವುದು ಅವರ ಪೀಳಿಗೆಯಲ್ಲಿ ಅವರ ಮಕ್ಕಳು ಸ್ಥಿರವಾಗಿರುವರು ಒಡಂಬಡಿಕೆಯ ಅನುಸರಣೆಯಲ್ಲಿ.
12 : ಅವರ ಸಂತಾನ ಸ್ಥಿರವಾಗಿರುವುದು ಒಡಂಬಡಿಕೆಯ ಪಾಲನೆಯಲ್ಲಿ ಅವರ ಮಕ್ಕಳೂ ಸಹ ನೆಲೆಯಾಗಿ ನಿಲ್ಲುವರು ಅದರ ಅನ್ವೇಷಣೆಯಲ್ಲಿ.
13 : ಉಳಿಯುವುದು ಅವರ ಸಂತಾನ ಎಂದೆಂದಿಗು ಅವರ ಗೌರವ ಅಳಿಸಿಹೋಗದು.
14 : ಸಮಾಧಾನದಲ್ಲಿ ಅವರ ದೇಹಗಳಿಗೆ ಸಮಾಧಿಯಾಯಿತು ಜೀವಂತವಾಗುವುದು ಅವರ ಹೆಸರು ತಲತಲಾಂತರದವರೆಗೂ.
15 : ಕುಲದವರು ಪ್ರಸಿದ್ಧಪಡಿಸುವರು ಅವರ ಜ್ಞಾನವನು ಸಭೆಯು ಸಾರುವುದು ಅವರ ಕೀರ್ತಿಯನು.
16 : ಹನೋಕ ಸರ್ವೇಶ್ವರನಿಗೆ ಮೆಚ್ಚಿಕೆಯಾಗಿದ್ದರಿಂದ ಹನೋಕನು ಒಯ್ಯಲ್ಪಟ್ಟನು ಹೀಗೆ ಪರಿವರ್ತನೆಯ ಆದರ್ಶವಾದನು ಸಮಸ್ತ ಪೀಳಿಗೆಗು.
17 : ನೋಹ ನೋಹನು ಕಂಡುಬಂದನು ಸಂಪೂರ್ಣ ಸತ್ಯವಂತನಾಗಿ ಅಂಗೀಕೃತನಾದನು ಪ್ರಕೋಪದ ಕಾಲದಲ್ಲಿ ಲೋಕಕ್ಕೆ ಬದಲಾಗಿ ಹೀಗೆ ಜಗತ್ತಿಗೊಂದು ಜನಶೇಷ ಉಳಿಯಿತು ಪ್ರಳಯಕಾಲದಲ್ಲಿ.
18 : ಅವನೊಂದಿಗೆ ನಿತ್ಯವಾದ ಒಡಂಬಡಿಕೆಗಳಾದವು ಎಲ್ಲ ಪ್ರಾಣಿಗಳು ಪ್ರಳಯದಿಂದ ನಾಶವಾಗುವುದಿಲ್ಲವೆಂದು.
19 : ಅಬ್ರಹಾಮ ಅಬ್ರಹಾಮನು ತಂದೆಯಾದನು ಅನೇಕ ಜನಾಂಗಗಳಿಗೆ ಪ್ರಖ್ಯಾತಿಯಲ್ಲಿ ಯಾವನು ಸಿಗನು ಸರಿಸಮಾನನು ಅವನಿಗೆ.
20 : ನಡೆದುಕೊಂಡನವನು ಮಹೋನ್ನತನ ಇಚ್ಛೆಯಂತೆ ಮಾಡಿಕೊಂಡನಾತ ಒಡಂಬಡಿಕೆಯನ್ನು ಅವನೊಂದಿಗೆ ಒಡಂಬಡಿಕೆಯನ್ನು ಸ್ಥಿರಪಡಿಸಿದನಾತ ಅವನ ದೇಹದಲ್ಲೇ ನಂಬಿಗಸ್ಥನಾಗಿ ಕಂಡುಬಂದನವನು ಅಗ್ನಿಪರೀಕ್ಷೆಯ ಕಾಲದಲ್ಲೇ.
21 : ಎಂದೇ ಅವನ ಸಂತಾನದ ಮೂಲಕ ಎಲ್ಲ ಜನರಿಗೆ ಆಶೀರ್ವಾದವಿರುವುದೆಂದು ಧರೆಯ ದೂಳಿನಂತೆ ಅವನ ಸಂತಾನ ಹೆಚ್ಚುವುದೆಂದು ಅವನ ಸಂತಾನವು ನಕ್ಷತ್ರಗಳಷ್ಟು ಅಧಿಕವಾಗುವುದೆಂದು ಸಮುದ್ರದಿಂದ ಸಮುದ್ರದವರೆಗು, ನದಿಯಿಂದ ಭೂಮಿಯ ಕಟ್ಟಕಡೆಯವರೆಗು ವನಿಗೆ ಸ್ವಾಸ್ತ್ಯವನ್ನು ಕೊಡುವೆನೆಂದು ಸರ್ವೇಶ್ವರ ಆಣೆಯಿಟ್ಟು ವಾಗ್ದಾನಮಾಡಿದನು.
22 : ಇಸಾಕ, ಯಕೋಬ ಅಬ್ರಹಾಮನ ನಿಮಿತ್ತ ಆತನ ಮಗ ಇಸಾಕನೊಂದಿಗೆ ಮಾಡಲಾಯಿತು ಅದೇ ವಾಗ್ದಾನ.
23 : ಸ್ಥಿರಗೊಳಿಸಿದನು ಸರ್ವೇಶ್ವರ ಎಲ್ಲ ಮಾನವರಿಗೂ ಒದಗಲಿರುವ ಆ ಆಶೀರ್ವಾದವನ್ನು, ಒಡಂಬಡಿಕೆಯನ್ನು; ಯಕೋಬನ ತಲೆಯ ಮೇಲೆ ಹೊರಿಸಿದನು ಆ ಹೊಣೆಗಾರಿಕೆಯನ್ನು; ಅವನನ್ನು ದೃಢಗೊಳಿಸಿ, ಸೊತ್ತನ್ನು ಕೊಟ್ಟು, ಹನ್ನೆರಡು ಕುಲಗಳಿಗೆ ವಿಭಾಗಿಸಿದನು ಆ ಪಾಲನ್ನು.

Holydivine