Sirach - Chapter 34
Holy Bible

1 : ಕನಸುಗಳು ತಿಳುವಳಿಕೆಯಿಲ್ಲದವರಿಗೆ ವ್ಯರ್ಥ ಹಾಗು ಅಶುದ್ಧ ಆಕಾಂಕ್ಷೆಗಳು ಇರುತ್ತವೆ ಕನಸುಗಳು ಮೂರ್ಖರಿಗೆ ರೆಕ್ಕೆಬರುವಂತೆ ಮಾಡುತ್ತವೆ.
2 : ಕನಸುಗಳ ಮೇಲೆ ಮನಸ್ಸಿಡುವವನು ನೆರಳನು ಹಿಡಿಯಹೋದವನಂತೆ ಗಾಳಿಯನು ಬೆನ್ನಟ್ಟಿಹೋದವನಂತೆ.
3 : ಕನಸಿನ ದರ್ಶನವು, ಇದಕ್ಕೆ ಪ್ರತಿಯಾಗಿ ಅದು ಇದ್ದಂತೆ ಮುಖಕ್ಕೆ ಇದಿರಾಗಿ ಅದರ ಪ್ರತಿಬಿಂಬವಿದ್ದಂತೆ.
4 : ಹೊಲೆಯಿಂದ ಯಾವುದು ಶುದ್ಧವಾದೀತು? ಸಟೆಯಿಂದ ಯಾವುದು ದಿಟವಾದೀತು?
5 : ಭವಿಷ್ಯನುಡಿಗಳು, ಶಕುನಗಳು, ಕನಸುಗಳು ಇವೆಲ್ಲವು ವ್ಯರ್ಥವೇ ಪ್ರಸವವೇದನೆಯಲ್ಲಿರುವ ಸ್ತ್ರೀಯ ಮನಸ್ಸಿನಂತೆ ಇವು ಮನಸ್ಸಿನಲ್ಲಿ ಊಹೆಗಳನ್ನು ಉದ್ಭವಿಸುತ್ತವೆ.
6 : ಗಮನಿಸಬೇಡ ಇಂಥವುಗಳೆಲ್ಲವನ್ನು ಮಹೋನ್ನತನಿಂದ ನಿನಗಾಗಿ ಅವು ಕಳುಹಿಸಲ್ಪಟ್ಟ ಹೊರತು.
7 : ಕನಸುಗಳು ಅನೇಕರನು ಅಡ್ಡಹಾದಿಗೆ ಹಚ್ಚಿವೆ ಅವುಗಳನು ನೆಚ್ಚಿಕೊಂಡು ಅವರು ಮೋಸ ಹೋಗಿದ್ದಾರೆ.
8 : ಸುಳ್ಳು ಮಾತು ಬೇಕಿಲ್ಲ ಧರ್ಮಶಾಸ್ತ್ರ ನೆರವೇರುವುದಕ್ಕೆ ಜ್ಞಾನ ಪರಿಪೂರ್ಣವಾಗುವುದು ಸತ್ಯಸಂಧನಿಗೆ.
9 : ಪ್ರಯಾಣ ದೇಶಸಂಚಾರಮಾಡುವವನು ಅನೇಕ ವಿಷಯ ಗಳನು ಬಲ್ಲನು ಅನುಭವಸ್ಥನು ಜ್ಞಾನವನ್ನು ಪ್ರಸಿದ್ಧಿಗೆ ತರುವನು.
10 : ಅನುಭವವಿಲ್ಲದವನಿಗೆ ತಿಳುವಳಿಕೆ ಕಡಿಮೆ ಹೆಚ್ಚಾಗಿ ದೇಶಸಂಚಾರ ಮಾಡಿದವನಿಗೆ ಹೆಚ್ಚು ನಿಪುಣತೆ.
11 : ನಾನು ದೇಶಾಟನೆ ಮಾಡಿದ ಕಾಲದಲಿ ಅನೇಕ ಸಂಗತಿಗಳನ್ನು ಕಂಡಿರುವೆ ನನ್ನ ನುಡಿಗೆ ನಿಲುಕದಷ್ಟು ತಿಳುವಳಿಕೆ ನನಗಾಗಿದೆ.
12 : ಅನೇಕ ಸಾರಿ ನನ್ನ ಪ್ರಾಣಕ್ಕೆ ಅಪಾಯವಿತ್ತು ಆದರೆ ಈ ತಿಳುವಳಿಕೆಯ ಮೂಲಕ ಪ್ರಾಣ ಉಳಿಯಿತು.
13 : ದೈವಭಯ ದೇವರಿಗೆ ಭಯಪಡುವವರ ಆತ್ಮ ಬದುಕುತ್ತದೆ ಏಕೆಂದರೆ ತಮ್ಮನು ಕಾಪಾಡುವವರ ಮೇಲೆ ಅವರ ನಿರೀಕ್ಷೆಯಿದೆ.
14 : ದೇವರಿಗೆ ಭಯಪಡುವವನು ಅಂಜುವುದಿಲ್ಲ ದೇವರೇ ಅವನ ನಿರೀಕ್ಷೆಯಾಗಿರುವುದರಿಂದ, ಅಳುಕಿ ಹಿಂಜರಿಯುವುದಿಲ್ಲ.
15 : ಯಾರ ಕಡೆಗೆ ಅವನ ಗಮನ? ಯಾರು ಅವನಿಗೆ ಆಶ್ರಯ? ದೇವರಿಗೆ ಭಯಪಡುವವನ ಆತ್ಮ ಧನ್ಯ !
16 : ಸರ್ವೇಶ್ವರನ ಕಟಾಕ್ಷ ತನ್ನನು ಪ್ರೀತಿಸುವವರ ಮೇಲೆ ಅಂಥವರಿಗೆ ಬಲವಾದ ರಕ್ಷಣೆ ಹಾಗು ಆಶ್ರಯ ಆತನೇ. ಆತನೇ ಬಿಸಿಗಾಳಿಯಿಂದ ರಕ್ಷಿಸುವ ಮರೆ, ಮಧ್ಯಾಹ್ನದ ತಾಪವ ತಪ್ಪಿಸುವ ಹೊದಿಕೆ. ಎಡವದಂತೆ ಕಾಯುವವನು, ಬೀಳದಂತೆ ಕಾಪಾಡುವವನು ಆತನೇ.
17 : ಆತನು, ಆತ್ಮವನ್ನು ಚೈತನ್ಯಗೊಳಿಸಿ, ಕಣ್ಣುಗಳನ್ನು ಕಳೆಗೊಳಿಸುವನು; ಕ್ಷೇಮ, ಜೀವ, ಆಶೀರ್ವಾದಗಳನ್ನು ದಯಪಾಲಿಸುವನು.
18 : ಬಲಿಯರ್ಪಣೆ ಅನ್ಯಾಯದಿಂದ ಗಳಿಸಿದವುಗಳನ್ನು ಬಲಿಯಾಗಿ ಅರ್ಪಿಸುವುದು ಕುಚೇಷ್ಟೆಯಷ್ಟೇ ದುಷ್ಟರ ಕುಚೇಷ್ಟೆಯಿಂದ ಗಿಟ್ಟದು ಮೆಚ್ಚಿಗೆ.
19 : ಅಧರ್ಮಿಗಳ ಅರ್ಪಣೆಗಳಲ್ಲಿ ಮಹೋನ್ನತನಿಗೆ ಸಂತೋಷವಿಲ್ಲ ಅವರ ಅನೇಕ ಯಜ್ಞಗಳ ನಿಮಿತ್ತ ಪಾಪ ನಿವಾರಣೆ ದೊರಕುವುದಿಲ್ಲ.
20 : ಬಡವರ ಸ್ವತ್ತಿನಿಂದ ಯಜ್ಞಪಶುವನ್ನು ತರುವವನು ತಂದೆಯ ಎದುರಿನಲ್ಲೇ ಮಗನನ್ನು ಕೊಲ್ಲುವಂಥವನು.
21 : ಹಸಿದವನ ಅನ್ನ ಬಡವನ ಜೀವಾಧಾರ ಅದನ್ನು ಕಸಿದುಕೊಳ್ಳುವವನು ಕೊಲೆಗಾರ.
22 : ನೆರೆಯವನ ಜೀವನಾಧಾರವನು ಕಿತ್ತು ಕೊಳ್ಳುವುದು ಕೊಲೆಗೆ ಸಮಾನ ತನ್ನ ಆಳಿನ ಕೂಲಿಯನು ಹಿಡಿದುಕೊಳ್ಳುವುದು ರಕ್ತಪಾತಕ್ಕೆ ಸಮಾನ.
23 : ಒಬ್ಬನು ಕಟ್ಟುವುದು, ಇನ್ನೊಬ್ಬನು ಕೆಡವುವುದು; ಇದರಿಂದೇನು ಲಾಭ, ಕಠಿಣ ದುಡಿಮೆಯ ಹೊರತು?
24 : ಒಬ್ಬನು ಪ್ರಾರ್ಥಿಸುವುದು, ಇನ್ನೊಬ್ಬನು ಶಪಿಸುವುದು; ಇವರಲ್ಲಿ ಯಾರ ಮಾತನು ದೇವರು ಆಲಿಸುವುದು?
25 : ಶವ ಮುಟ್ಟಿದ ಮೇಲೆ ಸ್ನಾನ ಮಾಡಿದವನು ತಿರುಗಿ ಅದನ್ನು ಮುಟ್ಟಿದರೆ ಸ್ನಾನದಿಂದಾದ ಲಾಭವೇನು?
26 : ಅಂತೆಯೇ ತನ್ನ ಪಾಪಗಳಿಗಾಗಿ ಉಪವಾಸ ಮಾಡಿ ಪುನಃ ಪಾಪಮಾಡುವವನು; ಇಂಥವನ ಮೊರೆಯನು ಕೇಳುವರಾರು? ದೇಹ ದಂಡನೆಯಿಂದ ಅವನಿಗಾದ ಲಾಭವೇನು?

Holydivine