Sirach - Chapter 28
Holy Bible

1 : ಪ್ರತೀಕಾರ ಮಾಡುವವನು ಸರ್ವೇಶ್ವರನಿಂದ ಪ್ರತೀಕಾರ ಹೊಂದುವನು ಅವನ ಪಾಪಗಳನ್ನು ಸರ್ವೇಶ್ವರ ಸದಾ ಮನಸ್ಸಿನಲ್ಲಿ ಇಟ್ಟುಕೊಳ್ಳುವರು.
2 : ಕ್ಷಮೆನೀಡು ನಿನ್ನ ನೆರೆಯವನು ಮಾಡಿದ ತಪ್ಪಿಗೆ ನೀನು ಪ್ರಾರ್ಥಿಸುವಾಗ ಕ್ಷಮೆ ದೊರಕುವುದು ನಿನ್ನ ಪಾಪಗಳಿಗೆ.
3 : ನೆರೆಯವನ ಮೇಲೆ ಮುನಿಸಿಟ್ಟುಕೊಂಡರೆ ದೇವರಿಂದ ಕ್ಷಮೆಹೊಂದಲು ಆದೀತೆ?
4 : ತನ್ನಂಥ ಮನುಷ್ಯನ ಮೇಲೆ ಅವನಿಗೆ ಕರುಣೆಯಿಲ್ಲದಿರೆ ಬೇಡಿಕೊಂಡರೆ ಪಾಪಮನ್ನಣೆ ಪಡೆಯುವನೆ?
5 : ಕೇವಲ ನರಮಾನವನಾದವನು ಇಂಥ ಸಿಡುಕಿಟ್ಟುಕೊಂಡರೆ ಇವನ ಪಾಪಗಳಿಗೆ ದೋಷಪರಿಹಾರ ಮಾಡುವವರು ಯಾರಿದ್ದಾರೆ?
6 : ನಿನ್ನ ಅಂತ್ಯಕಾಲವನ್ನು ಸ್ಮರಿಸಿಕೊಂಡು ಹಗೆತನವನು ತೊರೆದುಬಿಡು ಸಾವು ಮರಣಗಳನ್ನು ನೆನೆದು ದೇವರ ಆಜ್ಞೆಗಳನ್ನು ಪಾಲನೆಮಾಡು.
7 : ದೇವರ ಆಜ್ಞೆಗಳನ್ನು ಸ್ಮರಿಸಿಕೊಂಡು ನೆರೆಯವನ ಮೇಲೆ ಮುನಿಸಬೇಡ ಮಹೋನ್ನತನ ಒಡಂಬಡಿಕೆಯನ್ನು ನೆನಸಿ ಕೊಂಡು ತಪ್ಪು ನೆಪ್ಪುಗಳನ್ನು ವೀಕ್ಷಿಸಬೇಡ.
8 : ಕಲಹ ಕಲಹದಿಂದ ದೂರ ಇರು; ಆಗ ಪಾಪಗಳನ್ನು ಕಡಿಮೆಮಾಡಿಕೊಳ್ಳುವೆ ಕೋಪಿಷ್ಠನು ಕಲಹವೆಂಬ ಬೆಂಕಿಗೆ ಎಣ್ಣೆ ಹೊಯ್ಯುತ್ತಾನೆ.
9 : ಪಾಪಾತ್ಮನು ಕಿಡಿಹಾಕುತ್ತಾನೆ ಸ್ನೇಹವಿದ್ದಲ್ಲಿ ಕಲಹ ಹುಟ್ಟಿಸುತ್ತಾನೆ ಸಮಾಧಾನವಿದ್ದಲ್ಲಿ.
10 : ಸೌದೆಯು ಎಷ್ಟೋ ಅಷ್ಟೇ ಬೆಂಕಿ; ಕಲಹ ಎಂಥದೋ ಅಂಥದೇ ಕ್ರೋಧ, ಮನುಷ್ಯನ ಬಲವೆಷ್ಟೋ ಅಷ್ಟೇ ರೌದ್ರ; ಐಶ್ವರ್ಯ ಹೆಚ್ಚಿದಂತೆ ಹೆಚ್ಚುತ್ತದೆ ಕೋಪ.
11 : ಫಕ್ಕನೆ ಆರಂಭವಾದ ಕಚ್ಚಾಟ ಕಿಚ್ಚನು ಹೊತ್ತಿಸುತ್ತದೆ ತಟ್ಟನೆ ಹುಟ್ಟಿದ ಬಡಿದಾಟ ರಕ್ತಪಾತಕ್ಕೆ ಒಯ್ಯುತ್ತದೆ.
12 : ಕಿಡಿ ಉರಿಯುವುದು ಊದಿದರೆ ಅದು ಆರುವುದು ಉಗುಳಿದರೆ ಇವೆರಡೂ ಬರುವುದು ಬಾಯಿಂದಲೇ.
13 : ಸುಳ್ಳು ಅಪವಾದ ಶಾಪಹಾಕು ಕಿವಿಯೂದುವವರಿಗೆ; ಎರಡು ನಾಲಗೆಯುಳ್ಳವರಿಗೆ ಕಾರಣ, ಇಂಥವರು ಕೆಡಕುಮಾಡಿರುವರು ಅನೇಕ ಶಾಂತಿಪುರುಷರಿಗೆ.
14 : ಮೂರನೆಯವನ ನಾಲಗೆ ಅನೇಕರನ್ನು ಕದಲಿಸಿಬಿಟ್ಟಿದೆ ಅವರನ್ನು ಜನಾಂಗದಿಂದ ಜನಾಂಗಕೆ ಚದರಿಸಿಬಿಟ್ಟಿದೆ. ಬಲವುಳ್ಳ ಪಟ್ಟಣಗಳನ್ನು ಕೆಡವಿಬಿಟ್ಟಿದೆ ಮಹಾತ್ಮರ ಮನೆಗಳನ್ನು ಮಣ್ಣುಪಾಲಾಗಿಸಿದೆ.
15 : ಮೂರನೆಯವನ ನಾಲಗೆ ಶೂರಸ್ತ್ರೀಯರನ್ನು ಹೊರಕ್ಕಟ್ಟಿದೆ ಅವನ ದುಡಿಮೆಯ ಫಲವೇ ಅವನಿಗೆ ದೊರಕದಂತಾಗಿ ಮಾಡಿದೆ.
16 : ಅದಕ್ಕೆ ಲಕ್ಷ್ಯಕೊಡುವವನು ಸಮಾಧಾನ ಹೊಂದುವುದಿಲ್ಲ ಶಾಂತಿಯಿಂದ ಜೀವಿಸುವುದಿಲ್ಲ.
17 : ಚಾಟಿಯ ಹೊಡೆತ ಮೈಮೇಲೆ ಬರೆ ಎಬ್ಬಿಸುತ್ತದೆ ನಾಲಗೆಯ ಹೊಡೆತ ಎಲುಬುಗಳನ್ನು ಮುರಿಯುತ್ತದೆ.
18 : ಕತ್ತಿಯಿಂದ ಅನೇಕರು ಬಿದ್ದಿದ್ದಾರೆ ನಾಲಗೆಯಿಂದ ಇನ್ನೂ ಅನೇಕರು ಸತ್ತಿದ್ದಾರೆ.
19 : ಮೂರನೆಯವನ ನಾಲಗೆಯಿಂದ ರಕ್ಷಿಸಲ್ಪಟ್ಟವನು ಅದರ ಕೋಪಕ್ಕೆ ಆಹುತಿಯಾಗದವನು ಅದರ ನೊಗಕ್ಕೆ ಬಿಗಿಯಲ್ಪಡದವನು ಅದರ ಕಟ್ಟುಗಳಿಂದ ಕಟ್ಟಲ್ಪಡದವನು ಧನ್ಯನು !
20 : ಏಕೆಂದರೆ ಅದರ ನೊಗ ಕಬ್ಬಿಣದ ನೊಗವು ಅದರ ಕಟ್ಟು ಕಂಚಿನ ಕಟ್ಟು.
21 : ಅದರಿಂದಾಗುವ ಮರಣ ದುರ್ಮರಣ ಅದಕ್ಕಿಂತ ಪಾತಾಳವೇ ಶ್ರೇಷ್ಟ.
22 : ಸಜ್ಜನರ ಮೇಲೆ ಅದು ತನ್ನ ಆಳ್ವಿಕೆ ನಡೆಸಲು ಸಾಧ್ಯವಿಲ್ಲ ಅದರ ಉರಿಯಲ್ಲಿ ಅವರು ಸುಟ್ಟು ಹೋಗುವುದಿಲ್ಲ.
23 : ಸರ್ವೇಶ್ವರನನ್ನು ಬಿಟ್ಟವರು ಬೀಳುವರು ಅದರಲ್ಲಿ ಅದು ಆರದೆ ಉರಿಯುತ್ತಿರುತ್ತದೆ ಅವರಲ್ಲಿ ಅವರ ಮೇಲೆ ಎರಗುವುದು ಸಿಂಹದಂತೆ ಅವರನ್ನದು ಬಗಿದುಹಾಕುವುದು ಚಿರತೆಯಂತೆ.
24 : ನಿನ್ನ ಸೊತ್ತಿನ ಸುತ್ತಲೂ ಮುಳ್ಳುಬೇಲಿ ಹಾಕಿಕೊ ನಿನ್ನ ಬೆಳ್ಳಿಬಂಗಾರವನ್ನು ಬೀಗಹಾಕಿ ಭದ್ರಪಡಿಸಿಕೊ.
25 : ಅಂತೆಯೆ ನಿನ್ನ ಮಾತುಗಳಿಗೆ ತಕ್ಕಡಿ ಕಲ್ಲುಗಳನು ಇಟ್ಟುಕೊ ನಿನ್ನ ಬಾಯಿಗೆ ಅಗುಳಿಯನ್ನು ಮಾಡಿಕೊ.
26 : ಜಾಗ್ರತೆಯಿಂದಿರು ಅದರಲಿ ಜಾರಿಬೀಳದಂತೆ ಬಿದ್ದುಬಿಟ್ಟೀಯೆ ನಿನಗಾಗಿ ಹೊಂಚಿಕೊಂಡಿರುವವನ ಮುಂದೆ !

Holydivine