Sirach - Chapter 16
Holy Bible

1 : ಹಟಮಾರಿಗಳ ದುರ್ಗತಿ ನಿರುಪಯುಕ್ತ ಮಕ್ಕಳ ಬಹು ಸಂಖ್ಯೆಯನ್ನು ಬಯಸಬೇಡ ಭಕ್ತಿಹೀನ ಮಕ್ಕಳಲ್ಲಿ ಆನಂದಪಡಬೇಡ.
2 : ದೇವರಲ್ಲಿ ಅವರಿಗೆ ಭಯಭಕ್ತಿ ಇಲ್ಲದಿರಲು ಸಂತೋಷಿಸಬೇಡ ಅವರು ಬೆಳೆದು ಅಧಿಕ ಸಂಖ್ಯೆಯಲ್ಲಿದ್ದರೂ.
3 : ಅವರ ಬದುಕಿನಲ್ಲಿ ಭರವಸೆಯಿಡಬೇಡ ಅವರ ಅಧಿಕ ಸಂಖ್ಯೆಯಲಿ ಮನಸ್ಸಿಡಬೇಡ. ಸಜ್ಜನರಲ್ಲದ ಸಾವಿರ ಮಕ್ಕಳಿಗಿಂತ ಒಬ್ಬನೇ ಮೇಲು ದುರುಳ ಮಕ್ಕಳಿಗಿಂತ ಅವರಿಲ್ಲದೆ ಮಡಿಯುವುದೇ ಲೇಸು.
4 : ವಿವೇಕಿಯಾದ ಒಬ್ಬನಿಂದ ಊರು ಬಲಿಯುತ್ತದೆ ಅಧರ್ಮಿಗಳ ಪೀಳಿಗೆಯು ಅಳಿದುಹೋಗುತ್ತದೆ.
5 : ಇಂಥ ಅನೇಕ ಘಟನೆಗಳನ್ನು ಕಣ್ಣಾರೆ ಕಂಡಿದ್ದೇನೆ ಇವುಗಳಿಗಿಂತ ಹೆಚ್ಚಿನವುಗಳನ್ನು ಕಿವಿಯಾರೆ ಕೇಳಿದ್ದೇನೆ.
6 : ಪಾಪಾತ್ಮರ ಸಭೆಯಲ್ಲಿ ಹೊತ್ತಿಕೊಳ್ಳುವುದು ಬೆಂಕಿ ಅವಿಧೇಯ ಜನರ ನಿಮಿತ್ತ ಉರಿಯುವುದು ಕೋಪಾಗ್ನಿ.
7 : ದೇವರು ಮನ್ನಿಸಲಿಲ್ಲ ಪೂರ್ವಕಾಲದ ಪ್ರಚಂಡ ಪುರುಷರನ್ನು ಸ್ವಶಕ್ತಿಯಲ್ಲಿಯೇ ನಂಬಿಕೆಯಿಟ್ಟು ಬಿದ್ದುಹೋದ ಆ ನರರನ್ನು.
8 : ಆತ ಉಳಿಸಲಿಲ್ಲ ಲೋಟನು ಪ್ರವಾಸಿಯಾಗಿದ್ದ ಪ್ರದೇಶವನ್ನು ಅವರ ಅಹಂಕಾರಕ್ಕಾಗಿ ಹೀನೈಸಿಬಿಟ್ಟನು ಅವರನ್ನು.
9 : ನಾಶಕ್ಕೆ ಗುರಿಯಾದ ಜನಾಂಗವನು ಆತ ಕನಿಕರಿಸಲಿಲ್ಲ ತಮ್ಮ ಪಾಪದಲ್ಲಿಯೆ ಆದರವರು ಸಂಹಾರ.
10 : ಆತ ದಂಡಿಸದೆ ಬಿಡಲಿಲ್ಲ ಆರು ಲಕ್ಷ ಕಾಲಾಳುಗಳನ್ನು ಕಠಿಣ ಹೃದಯಿಗಳಾಗಿದ್ದ ಆ ಜನರನ್ನು.
11 : ಒಬ್ಬನೇ ಹಠಮಾರಿಯಿದ್ದರೂ ಅವನನ್ನು ಶಿಕ್ಷಿಸದಿದ್ದರೆ ಆಶ್ಚರ್ಯವಾಗುತ್ತಿತ್ತು ! ಕಾರಣ, ದೇವನಲ್ಲಿವೆ ಕೃಪೆಯೂ ಕೋಪವೂ; ಅತಿ ಕನಿಕರವುಳ್ಳವನಾಗಿದ್ದರೂ ಸುರಿದುಬಿಡುವನು ಕೋಪವನ್ನು.
12 : ಆತನಲ್ಲಿ ಅಧಿಕವಾಗಿದೆ ಕರುಣೆ; ಅಂತೆಯೆ ಕಠಿಣವಾಗಿದೆ ದಂಡನೆ ನ್ಯಾಯತೀರಿಸುವನಾತ ಅವನವನ ಕೃತ್ಯಗಳಿಗೆ ತಕ್ಕಂತೆ.
13 : ತನ್ನ ಕೊಳ್ಳೆಯೊಂದಿಗೆ ಪಾರಾಗಲಾರ ಪಾಪಿಯು ವಿಫಲವಾಗದು ಭಕ್ತರ ಕಷ್ಟಸಹಿಷ್ಣುತೆಯು.
14 : ಪ್ರತಿಯೊಬ್ಬನಿಗೆ ಸಂಭಾವನೆ ದಕ್ಕುವುದು ಅವನ ಕಾರ್ಯಕ್ಕನುಸಾರವಾಗಿ ಪ್ರತಿಯೊಬ್ಬನು ಅನುಭವಿಸುವನು ತನ್ನ ನಡತೆಗೆ ಸರಿಯಾಗಿ.
15 : ಸರ್ವೇಶ್ವರನಿಂದ ಫರೋಹನ ಹೃದಯ ಕಠಿಣವಾಯಿತು ಹೀಗೆ ವಿಶ್ವವು ದೇವರ ಮಹತ್ಕಾರ್ಯಗಳನ್ನು ಅರಿತುಕೊಳ್ಳುವಂತಾಯಿತು.
16 : ಸೃಷ್ಠಿಸಮಸ್ತಕ್ಕೂ ದೇವರು ತನ್ನ ಕರುಣೆಯನ್ನು ಪ್ರಕಟಿಸಿದ್ದಾರೆ ಮಾನವನ ಮಧ್ಯೆ ಕತ್ತಲನ್ನೂ ಬೆಳಕನ್ನೂ ಬೇರ್ಪಡಿಸಿದ್ದಾರೆ.
17 : ಪ್ರತಿಫಲ ನಿಶ್ಚಯ ‘ನಾನು ದೇವರಿಗೆ ಮರೆಯಾಗಿರುವೆ; ಉನ್ನತದಲ್ಲಿ ನನ್ನನು ನೆನೆಸುವನಾರು? ಗಣನಾತೀತ ಜನಸಂದಣಿಯಲಿ ನನ್ನನು ಗುರುತಿಸಬಲ್ಲವರಾರು? ಮೇರೆಯಿಲ್ಲದ ಸೃಷ್ಟಿಯಲಿ ನನ್ನ ಆತ್ಮವು ಮಾತ್ರ ಎಷ್ಟರದು?’ ಈ ಪರಿಯೆಲ್ಲ ನೀನು ಹೇಳಿಕೊಳ್ಳದಿರು.
18 : ಕದಲುವುದು ಆಕಾಶ, ಆಕಾಶಗಳ ಆಕಾಶ ಭೂಮಿ, ಸಾಗರ; ದೇವರು ಪ್ರತ್ಯಕ್ಷವಾಗುವಾಗ.
19 : ಆತ ನೋಡುವಾಗ ಗಡಗಡನೆ ನಡುಗುವುವು ಬೆಟ್ಟಗಳೂ ಭೂಮಿಯ ಅಸ್ತಿಭಾರವೂ.
20 : ಯಾವ ಹೃದಯವೂ ಆಲೋಚಿಸುವುದಿಲ್ಲ ಈ ವಿಷಯಗಳನು ಗ್ರಹಿಸುವವನಾರು ಆತನ ರೀತಿನೀತಿಗಳನು?
21 : ಬಿರುಗಾಳಿ ಒಂದುಂಟು; ಅದನ್ನು ಯಾವ ಮನುಷ್ಯನೂ ಕಂಡಿಲ್ಲ ದೇವರ ಕಾರ್ಯದ ಬಹುಭಾಗ ಕಣ್ಣಿಗೆ ಕಾಣುವುದಿಲ್ಲ.
22 : ಆತನ ನೀತಿಕಾರ್ಯಗಳನ್ನು ಯಾರಿಂದ ಮೆಚ್ಚಿಕೊಳ್ಳಲು ಸಾಧ್ಯ? ಅದಕ್ಕಾಗಿ ಯಾರು ತಾನೇ ಕಾದುಕೊಂಡಿರಲು ಸಾಧ್ಯ? ಆತನ ಒಪ್ಪಂದ ಈಡೇರುವ ಕಾಲ ಇನ್ನೂ ದೂರವಿದೆಯಲ್ಲಾ?
23 : ಇಂಥ ಮಾತುಗಳನ್ನೆಲ್ಲ ತಲೆಯಲಿ ತುಂಬಿಕೊಳ್ಳುವವನು ಬುದ್ಧಿಹೀನನು ಹೀಗೆಲ್ಲಾ ಹುಚ್ಚುಹುಚ್ಚಾಗಿ ಆಲೋಚಿಸುತ್ತಿರುವನು ಅವನು.
24 : ಸೃಷ್ಟಿಯಲ್ಲಿ ದೇವರ ಸುಜ್ಞಾನ ಮಗನೇ, ವಿವೇಕಿಯಾಗು ನನ್ನ ಮಾತನ್ನಾಲಿಸು ಪೂರ್ಣಮನಸ್ಸಿನಿಂದ ನನ್ನ ಮಾತುಗಳನ್ನು ಗಮನಿಸು.
25 : ಸುಶಿಕ್ಷಣವನ್ನು ತಿಳಿಯಪಡಿಸುವೆನು ಸಮತೂಕವಾಗಿ ಜ್ಞಾನವನ್ನು ತಿಳಿಸಿಕೊಡುವೆನು ಯಥಾರ್ಥವಾಗಿ.
26 : ದೇವರ ಕಾರ್ಯಗಳು ನ್ಯಾಯವಾಗಿವೆ ಆರಂಭದಿಂದಲೇ ಅವುಗಳ ಭಾಗೋಪಭಾಗಗಳನ್ನು ವಿಂಗಡಿಸಿಹನು ನಿರ್ಮಾಣ ಕಾಲದಿಂದಲೇ.
27 : ಎಂದೆಂದಿಗೂ ನಿಲ್ಲದಂತೆ ಕ್ರಮಪಡಿಸಿರುವನು ತನ್ನ ಕಾರ್ಯಗಳನ್ನೆಲ್ಲ ಅವುಗಳಿಗೆ ಹಸಿವು-ದಣಿವುಗಳಿಲ್ಲ; ತಮ್ಮ ಕೆಲಸವನ್ನು ಅವು ನಿಲ್ಲಿಸುವುದಿಲ್ಲ.
28 : ಒಂದು ಇನ್ನೊಂದನ್ನು ದೂಡುವುದಿಲ್ಲ ಆತನ ಅಪ್ಪಣೆಯನ್ನು ಎಂದೂ ಉಲ್ಲಂಘಿಸುವುದಿಲ್ಲ.
29 : ಆಮೇಲೆ ದೇವರು ಭೂಮಿಯನ್ನು ಕಟಾಕ್ಷಿಸಿದರು ಅದನ್ನು ಸಕಲ ಸೌಭಾಗ್ಯದಿಂದ ತುಂಬಿಸಿದರು.
30 : ಎಲ್ಲಾ ತರದ ಜೀವಜಂತುಗಳು ತುಂಬಿ ಕೊಂಡವು ಅದರೊಳಗೆ ಕೊನೆಗೆ ಅವು ಮರಳಿ ಮಣ್ಣಾಗಿ ಸೇರುವುವು ಅದರಲ್ಲೆ.

Holydivine