Sirach - Chapter 22
Holy Bible

1 : ಸೋಮಾರಿ ಮೈಗಳ್ಳನು ಮೈಲಿಗೆ ತುಂಬಿದ ಕಲ್ಲಿಗೆ ಸಮಾನ ಎಲ್ಲರೂ ಛೀಮಾರಿ ಹಾಕುವರು ಅವನಿಗೆ ಮಾನವಿಲ್ಲದ ಕಾರಣ.
2 : ಮೈಗಳ್ಳ ತಿಪ್ಪೆಯ ಮೇಲಿರುವ ಹೇಸಿಗೆಗೆ ಸಮಾನ ಕೈಒದರಿಬಿಡುವರು ಜನರು ಅದನ್ನು ಮುಟ್ಟಿದ ತಕ್ಷಣ.
3 : ಕುಲಗೆಟ್ಟ ಕುಡಿಗಳು ತುಂಟನನ್ನು ಹೆತ್ತದಕ್ಕೆ ತಂದೆಗೆ ಅವಮಾನ ಮೂರ್ಖ ಮಗಳು ಹುಟ್ಟಿದರೋ ಅವನಿಗೆ ನಷ್ಟ.
4 : ವಿವೇಕವುಳ್ಳ ಮಗಳು ತನ್ನ ಪತಿಯನ್ನು ಕಂಡುಕೊಳ್ಳುವಳು ಮಾನಗೆಟ್ಟವಳು ತಂದೆಗೆ ವ್ಯಸನವನ್ನುಂಟು ಮಾಡುವಳು.
5 : ಲಜ್ಜೆಗೆಟ್ಟವಳು ತಂದೆಯ ಹಾಗು ಗಂಡನ ಮಾನ ಕಳೆಯುವಳು ಅವರಿಬ್ಬರೂ ಅವಳನ್ನು ಹೇಸುವರು.
6 : ಅನುಚಿತಕಾಲದ ಬುದ್ಧಿಮಾತು, ಅಳುವ ಕಾಲದಲಿ ಹಾಡುವ ಗೀತೆಗೆ ಸಮಾನ ಬೆತ್ತಬೆದರಿಕೆ ಎಲ್ಲ ಕಾಲದಲ್ಲೂ ಉಚಿತ; ಅವುಗಳಿಂದ ಬರುವುದು ಜ್ಞಾನ.
7 : ಒಳ್ಳೆಯ ಮಕ್ಕಳು ನತದೃಷ್ಟ ಹೆತ್ತವರ ಗೋಳನ್ನು ಮರೆಯಿಸುವರು.
8 : ದುರ್ನಡತೆಯ, ಅಸಂಸ್ಕøತ, ಮೊಂಡು ಹೃದಯದ ಮಕ್ಕಳು ತಮ್ಮ ಕುಲಕ್ಕೆ ಕಂಟಕಪ್ರಾಯರಾಗಿರುವರು.
9 : ಸುಜ್ಞಾನ-ಮೂರ್ಖತನ ಮೂರ್ಖನಿಗೆ ಬೋಧನೆ ಮಾಡುವವನೇ, ನೀನು ಒಡೆದ ಮಣ್ಣಿನ ಜಾಡಿಯನ್ನಂಟಿಸುವವನಂತೆ! ಗಾಢನಿದ್ರೆಯಲ್ಲಿರುವವನನ್ನು ಎಬ್ಬಿಸುವವನಂತೆ!
10 : ಮೂರ್ಖನಿಗೆ ಬುದ್ಧಿ ಹೇಳುವುದು ತೂಕಡಿಸುವವನಿಗೆ ಕತೆ ಹೇಳಿದಂತೆ ಬುದ್ಧಿ ಹೇಳಿ ಮುಗಿಸಿದಾಗ ಅವನು ಕೇಳುವನು: ‘ಏನಂದೆ?’
11 : ಸತ್ತವನಿಗಾಗಿ ಶೋಕಿಸು; ಅವನ ಪ್ರಾಣ ಜ್ಯೋತಿ ನಂದಿಹೋಗಿದೆ ಮೂರ್ಖನಿಗಾಗಿ ಮರುಗು; ಅವನಲ್ಲಿ ಜ್ಞಾನ ಜ್ಯೋತಿ ಇಲ್ಲದಾಗಿದೆ ಸತ್ತವನಿಗಾಗಿ ಸ್ವಲ್ಪ ವ್ಯಸನಪಡು; ಅವನು ಪಡೆದಿದ್ದಾನೆ ಅಂತಿಮ ವಿಶ್ರಾಂತಿಯನ್ನು ಮೂರ್ಖನ ಬಾಳು ಮರಣಕ್ಕಿಂತ ಬೀಳು.
12 : ಮೃತನಿಗಾಗಿ ಶೋಕವನ್ನಾಚರಿಸುವುದುಂಟು ಏಳುದಿನಗಳವರೆಗೆ ಮೂರ್ಖರಿಗಾಗಿ ಗೋಳಾಡಬೇಕು, ಅವರು ಜೀವದಿಂದಿರುವವರೆಗೆ.
13 : ಮತಿಗೇಡಿಯೊಂದಿಗೆ ಮಾತು ಬೆಳೆಸಬೇಡ ತಿಳಿಗೇಡಿಯ ನೆರೆ ಸೇರಬೇಡ ತಿಳಿಗೇಡಿಯ ವಿಷಯದಲ್ಲಿ ಜಾಗ್ರತೆ! ಇಲ್ಲದಿದ್ದರೆ ಸಿಕ್ಕಿಕೊಳ್ಳುವೆ ಸಂಕಟಕ್ಕೆ ಅವನ ಒಡನಾಟದಿಂದ ನಿನಗೆ ದೋಷ ತಗಲುವುದು ಅವನಿಂದ ದೂರವಿರು, ಆಗ ನಿನಗೆ ವಿಶ್ರಾಂತಿ ದೊರಕುವುದು, ಅವನ ಹುಚ್ಚುತನದಿಂದ ನಿನಗೆ ಬೇಸರವಾಗದು.
14 : ಸೀಸಕ್ಕಿಂತ ಭಾರವಾದದ್ದು ಇದೆಯೇ? ಇದ್ದರೆ ಅದರ ಹೆಸರು ಮೂರ್ಖತನವೇ!
15 : ಉಪ್ಪು, ಉಸುಬು, ಕಬ್ಬಿಣಗಳ ಭಾರವನ್ನೂ ಸಹಿಸಲು ಸಾಧ್ಯ ಆದರೆ ಮೂರ್ಖನ ಭಾರವನ್ನು ಸಹಿಸಲು ಕಷ್ಟಸಾಧ್ಯ.
16 : ಮನೆಯ ಅಡ್ಡತೊಲೆ, ಭೂಕಂಪದಿಂದಲೂ ಬೀಳದಂತೆ ಮಾಡಬಹುದು ಅಂತೆಯೇ ಹಿತಬೋಧೆಯಿಂದ ಸುಸ್ಥಿರವಾದ ಮನಸ್ಸು ಶೋಧನೆ ಬಂದಾಗಲು ಅಳುಕದು.
17 : ತಿಳುವಳಿಕೆ ತುಂಬಿದ ಮನಸ್ಸಿನಲಿ ನೆಲೆಯಾದ ಹೃದಯ ಗಿಲಾವು ಮಾಡಿದ ಗೋಡೆಯ ಮೇಲೆ ಬರೆದ ಚಿತ್ರ.
18 : ಎತ್ತರದ ಬೇಲಿ ಗಾಳಿಯ ಹೊಡೆತಕ್ಕೆ ತಡೆಯದು ಅವಿವೇಕಿಯಾದ ಅಂಜುಬುರುಕನ ಹೃದಯ ಯಾವ ಭಯವನ್ನು ಸಹಿಸದು.
19 : ಸ್ನೇಹ ಕಣ್ಣು ಚುಚ್ಚಿದರೆ ಕಣ್ಣೀರು ಹೃದಯ ಚುಚ್ಚಿದರೆ ಮನದರಿವು.
20 : ಹಕ್ಕಿಗಳು ಹಾರಿಹೋಗುವುವು ಕಲ್ಲೆಸೆದರೆ ಸ್ನೇಹ ಮುರಿಯುವುದು ಸ್ನೇಹಿತನನ್ನು ನಿಂದಿಸಿದರೆ.
21 : ಗೆಳೆಯನ ವಿರುದ್ಧ ನೀನು ಕತ್ತಿ ಹಿರಿದಿದ್ದರೂ, ನಿರಾಶೆಯಾಗದಿರು ಒಂದು ವೇಳೆ ಸಂಧಾನವಾಗಬಹುದು;
22 : ಸ್ನೇಹಿತನ ವಿರುದ್ಧ ಮಾತಾಡಬೇಕಾಗಿ ಬಂದರೂ ಹಿಂದೆಗೆಯಬೇಡ, ಸಂಧಾನವಾಗಬಹುದು. ಆದರೆ ನಿಂದೆ, ಸೊಕ್ಕು, ಗುಟ್ಟುರಟ್ಟಾಗಿಸುವುದು, ನಂಬಿಕೆದ್ರೋಹ ಇಂಥವುಗಳ ನಿಮಿತ್ತ, ಎಂಥ ಸ್ನೇಹಿತನೂ ಬಿಟ್ಟುಹೋಗುವುದು ಖಂಡಿತ.
23 : ನೆರೆಯವನ ವಿಶ್ವಾಸವನ್ನು ಸಂಪಾದಿಸು, ಅವನು ಬಡವನಾಗಿರುವಾಗ; ನಿನಗೂ ಸಂತೃಪ್ತಿಯಾಗುವುದು, ಅವನಿಗೆ ಸುಖ ಬಂದಾಗ ಅವನನ್ನು ಬಿಡದಿರು, ಅವನು ಆಪತ್ಕಾಲದಲ್ಲಿರುವಾಗ ನಿನಗೂ ಪಾಲು ಬರುವುದು, ಅವನಿಗೆ ಯಶಸ್ಸು ದೊರಕಿದಾಗ.
24 : ಬಿರುಸುಮಾತುಗಳು ಹೊರಬೀಳುವುವು ರಕ್ತಪಾತದ ಮೊದಲು ಉಗಿಹೊಗೆಗಳಾಡುವುವು ಆವಿಗೆಯ ಬೆಂಕಿ ಭುಗಿಲೇಳುವ ಮೊದಲು.
25 : ಮಿತ್ರನಿಗೆ ಆಶ್ರಯಕೊಡಲು ನಾನು ಹಿಂಜರಿಯುವುದಿಲ್ಲ ಅವನಿಂದ ಮುಖತಪ್ಪಿಸಿಕೊಳ್ಳಲು ಇಷ್ಟಪಡುವುದಿಲ್ಲ.
26 : ಅವನಿಂದ ನನಗೇನಾದರೂ ಕೇಡು ಸಂಭವಿಸಿದಲ್ಲಿ ಕೇಳಿದವರೆಲ್ಲರೂ ಎಚ್ಚರಿಕೆ ವಹಿಸುವರು ಅವನ ವಿಷಯದಲ್ಲಿ.
27 : ಪಾಪ ತಡೆಗಟ್ಟಲು ಪ್ರಾರ್ಥನೆ ನಾನು ತಪ್ಪು ಮಾಡದಂತೆ, ನನ್ನ ನಾಲಿಗೆ ನನ್ನನು ಕೆಡಿಸದಂತೆ, ನನ್ನ ಬಾಯಿಗೆ ಕಾವಲಿರಿಸುವವರಾರು? ನನ್ನ ತುಟಿಗಳ ಮೇಲೆ ಜಾಣತನವೆಂಬ ಮುದ್ರೆ ಒತ್ತುವವರಾರು?

Holydivine