Sirach - Chapter 10
Holy Bible

1 : ಆಡಳಿತಗಾರರು ಜ್ಞಾನಿಯಾದ ಅಧಿಪತಿಯಿಂದ ಜನರಿಗೆ ದೊರಕುವುದು ಶಿಕ್ಷಣ ವಿವೇಕಿಯಾದವನ ಆಡಳಿತ ಕ್ರಮಬದ್ಧ.
2 : ಜನಾಧಿಪತಿ ಇದ್ದಂತೆ ಅವನ ಉದ್ಯೋಗಸ್ಥರು ಗ್ರಾಮಾಧಿಕಾರಿಯಂತೆ ಊರಜನರು.
3 : ಪ್ರಜೆಗಳು ನಾಶವಾಗುತ್ತಾರೆ ಶಿಸ್ತು ಇಲ್ಲದ ಅರಸನಿಂದ ರಾಷ್ಟ್ರವು ಅಭಿವೃದ್ಧಿ ಹೊಂದುತ್ತದೆ ಅಧಿಕಾರಿಗಳ ವಿವೇಕದಿಂದ.
4 : ಜಗತ್ತಿನ ಮೇಲೆ ಅಧಿಕಾರ ಇರುವುದು ದೇವರ ಕೈಯಲ್ಲಿ ತಕ್ಕ ಅಧಿಕಾರಿಗಳನ್ನು ಒದಗಿಸುವನವನು ಸೂಕ್ತ ಸಮಯದಲ್ಲಿ.
5 : ಮಾನವರ ಏಳಿಗೆ ದೇವರ ಕೈಯಲ್ಲಿದೆ ನೀಡುವನಾತ ಅಧಿಕಾರಿಗಳಿಗೆ ತಕ್ಕ ಮರ್ಯಾದೆ.
6 : ಅಹಂಕಾರ ನಿನ್ನ ನೆರೆಯವನು ಮಾಡುವ ಪ್ರತೀ ತಪ್ಪಿಗೂ ಮುನಿಸಿಕೊಳ್ಳಬೇಡ ಬಲಾತ್ಕಾರದಿಂದ ಯಾವುದನ್ನೂ ಮಾಡಬೇಡ.
7 : ಹೇಯವಾದುದು ಅಹಂಕಾರ ದೇವ-ಮಾನವರ ದೃಷ್ಟಿಯಲ್ಲಿ ಹೀಗೆ ಇಮ್ಮಡಿಯಾದುದು ಅಹಂಕಾರಿ ಮಾಡುವ ಹಾನಿ.
8 : ಅಧರ್ಮ, ಬಲಾತ್ಕಾರ, ಹಾಗು ಹಣ ಇವುಗಳಿಂದ ಅಧಿಕಾರ ತಪ್ಪಿಹೋಗುತ್ತದೆ ಹೀಗೆ ಅಧಿಪತ್ಯ ಮತ್ತೊಂದು ರಾಷ್ಟ್ರದ ಕೈಸೇರುತ್ತದೆ.
9 : ಮಣ್ಣು, ಬೂದಿ ಆಗಿರುವ ಮಾನವ ಉಬ್ಬಿಕೊಳ್ಳುವುದೆಂತು? ಅವನು ಬದುಕಿರುವಾಗಲೇ ಕರುಳು ಕೊಳೆತು ಹೋಗುವುದುಂಟು.
10 : ದೀರ್ಘವಾದ ರೋಗದಿಮದ ವೈದ್ಯನೂ ಸಮಸ್ಯೆಗೀಡಾಗುವನು ಇಂದು ಅರಸನಾದವನು ನಾಳೆ ಶವವಾಗುವನು ಸತ್ತಮೇಲೆ ಮನುಷ್ಯನು ಕ್ರಿಮಿಕೀಟ, ಮೃಗಗಳ ಪಾಲಾಗುವನು.
11 : ದೀರ್ಘವಾದ ರೋಗದಿಮದ ವೈದ್ಯನೂ ಸಮಸ್ಯೆಗೀಡಾಗುವನು ಇಂದು ಅರಸನಾದವನು ನಾಳೆ ಶವವಾಗುವನು ಸತ್ತಮೇಲೆ ಮನುಷ್ಯನು ಕ್ರಿಮಿಕೀಟ, ಮೃಗಗಳ ಪಾಲಾಗುವನು.
12 : ಅಹಂಕಾರ ಅಂಕುರಿಸುವುದು, ಮಾನವನು ದೇವರನ್ನು ಬಿಟ್ಟ ದಿನವೇ ಅವನ ಆತ್ಮ ತನ್ನ ನಿರ್ಮಾಪಕನನ್ನು ಬಿಟ್ಟು ತೊಲಗಿದೆ ಆಗಾಗಲೇ.
13 : ಅಹಂಕಾರವೇ ಪಾಪದ ಒರತೆ ಅಹಂಕಾರ ಪೀಡಿತನು ಹರಡುವುದು ಹೊಲೆಯನ್ನೆ; ಎಂತಲೆ ದೇವರು ಅಧಿಕ ವಿಪತ್ತನು ಹೇರುವರು ಅವನ ಮೇಲೆ ಹೀಗೆ ಅವನನ್ನು ಧ್ವಂಸಮಾಡುವರು ಸಂಪೂರ್ಣವಾಗಿಯೆ.
14 : ಸರ್ವೇಶ್ವರ ಉರುಳಿಸುವನು ಗದ್ದುಗೆಯಿಂದ ಅಧಿಕಾರಿಗಳನು ಅವರ ಸ್ಥಾನಕ್ಕೆ ಏರಿಸಿರುವನು ದೀನದಲಿತರನು.
15 : ಬೇರುಸಹಿತ ಕಿತ್ತೊಗೆದನು ಜನಾಂಗಗಳನು ತಂದಿರಿಸಿದನು ಅವರ ಸ್ಥಳದಲ್ಲಿ ದೀನರನು.
16 : ಆತನು ಜನಾಂಗಗಳ ಸೊತ್ತನ್ನು ಅಳಿಸಿಹನು ಭೂತಳದವರೆಗೂ ಅವರನ್ನು ನಾಶಮಾಡಿಹನು.
17 : ಅವರಲ್ಲಿ ಕೆಲವರನ್ನು ತೆಗೆದು ಹಾಕಿ, ನಾಶಮಾಡಿದನು ಭೂಮಿಯಲ್ಲಿ ಅವರ ಹೆಸರೇ ಇಲ್ಲದಂತೆ ಮಾಡಿದನು.
18 : ಅಹಂಕಾರ ಮಾನವನಿಗೋಸ್ಕರ ಉಂಟಾದುದಲ್ಲ ಮಿತಿಮೀರಿದ ಕೋಪ, ಸ್ತ್ರೀಯಿಂದ ಜನಿಸಿದವರಿಗಲ್ಲ.
19 : ಗೌರವಾನ್ವಿತರು ಸನ್ಮಾನವುಳ್ಳ ಸಂತತಿ ಎಂಥದು? ಮಾನವ ಸಂತತಿಯೇ; ಸನ್ಮಾನವುಳ್ಳ ಜನರು ಎಂಥವರು? ದೇವನಿಗೆ ಅಂಜುವವರೇ. ಸನ್ಮಾನಹೀನ ಸಂತತಿ ಎಂಥದು? ಮಾನವ ಸಂತತಿಯೇ; ಈ ಸನ್ಮಾನಹೀನ ಜನರು ಎಂಥವರು? ದೈವಾಜ್ಞೆಗಳ ಮೀರುವವರೇ.
20 : ಸಹೋದರರಲ್ಲಿ ಸನ್ಮಾನ ಸಲ್ಲುವುದು ಹಿರಿಯನಿಗೆ ದೇವರ ದೃಷ್ಟಿಯಲ್ಲಿ ಸನ್ಮಾನ ಪಾತ್ರರು ಆತನಿಗೆ ಅಂಜುವವರೇ.
21 : ಸರ್ವೇಶ್ವರನಲ್ಲಿನ ಭಯಭಕ್ತಿ ಏಳಿಗೆಗೆ ಮೂಲ ಒರಟುತನ ಹಾಗು ಅಹಂಕಾರ ತಿರಸ್ಕಾರಕ್ಕೆ ಮೂಲ.
22 : ಬಲ್ಲಿದವನಾಗಲೀ, ಪೂಜ್ಯನಾಗಲೀ, ಬಡವನಾಗಲೀ ಅವರ ಹೆಚ್ಚಳ ಇರುವುದು ದೇವರಿಗೆ ಭಯಪಡುವುದರಲ್ಲಿ.
23 : ವಿವೇಕಿಯಾದ ಬಡವನನ್ನು ಅವಮಾನ ಪಡಿಸುವುದು ಸರಿಯಲ್ಲ ಪಾಪಾತ್ಮನಿಗೆ ಮೇರೆ ಮರ್ಯಾದೆ ಸಲ್ಲಿಸುವುದು ತರವಲ್ಲ.
24 : ದೊಡ್ಡ ವ್ಯಕ್ತಿ, ನ್ಯಾಯಮೂರ್ತಿ, ಶಕ್ತಿಶಾಲಿ, ಇವರು ಸನ್ಮಾನ ಪಡೆಯಬಹುದು ಆದರೆ, ದೇವಭಯವಿರುವವನಿಗಿರುವಷ್ಟು ಮೇರೆಮರ್ಯಾದೆ ಇವರಿಗಿರದು.
25 : ಸ್ವತಂತ್ರ ಪ್ರಜೆಗಳು ಕಾದಿರುವರು ಬುದ್ಧಿವಂತ ಸೇವಕನಿಗಾಗಿ ಗೊಣಗುಟ್ಟಲಾರರು ವಿವೇಕಿಗಳು ಇದನ್ನು ನೋಡಿ.
26 : ದೀನತೆ-ಸರಳತೆ ನಿನ್ನ ಉದ್ಯೋಗದಲ್ಲಿ ಅತೀವ ಜಾಣತನ ತೋರಿಸಬೇಡ ಇಕ್ಕಟ್ಟಿಗೊಳಗಾದಾಗ ಆಷಾಡಭೂತಿ ಯಾಗಬೇಡ.
27 : ಹೊಟ್ಟೆಗಿಲ್ಲದ ಡಾಂಭಿಕನಿಗಿಂತಲು ದುಡಿದುಣ್ಣುವ ಗೃಹಸ್ಥನೇ ಮೇಲು.
28 : ಮಗನೇ, ನಿನ್ನ ಸ್ವಾಭಿಮಾನದ ಬಗ್ಗೆ ನಮ್ರತೆಯಿರಲಿ ಸ್ವಾಭಿಮಾನ ನಿನ್ನ ಘನತೆಗೆ ಅನುಗುಣವಾಗಿರಲಿ.
29 : ತನ್ನ ಆತ್ಮದ ವಿರುದ್ಧ ಪಾಪಮಾಡುವವನನ್ನು ನೀತಿವಂತನೆಂದು ಹೇಳುವರೇ? ತನ್ನ ಬಾಳನ್ನು ಅವಮಾನಪಡಿಸಿ ಕೊಳ್ಳುವವನನ್ನು ಯಾರಾದರೂ ಗೌರವಿಸುವರೇ?
30 : ಬಡವನಿಗೆ ಅವನ ಜ್ಞಾನದಿಂದಲೇ ಗೌರವ ಸಿರಿವಂತನಿಗೆ ಅವನ ಸಿರಿಯಿಂದಲೇ ಸನ್ಮಾನ.
31 : ಬಡತನದಲ್ಲಿ ಒಬ್ಬ ಸನ್ಮಾನಪಾತ್ರನಾದರೆ, ಸಿರಿಬಂದಾಗ ಇನ್ನೆಷ್ಟಾದಾನು? ಐಶ್ವರ್ಯದಲ್ಲಿ ಮಾನಗೆಟ್ಟವನು ಬಡತನ ಬಂದಾಗ ಇನ್ನೆಷ್ಟಾದಾನು?

Holydivine