Wisdom - Chapter 16
Holy Bible

1 : ಈ ಕಾರಣ ಆ ಜನರು ಬಾಧಿತ ರಾದರು ಅಂಥ ಪ್ರಾಣಿಗಳಿಂದಲೇ ನೋವುಬಾಧೆಗಳಿಗೆ ಒಳಗಾದರು ಆ ವಿಶೇಷ ಜಂತುಗಳಿಂದಲೇ.
2 : ಇಂಥ ಶಿಕ್ಷೆಗೆ ಬದಲಾಗಿ ಹಿತಗೈದಿರಿ ದೇವಾ ನಿಮ್ಮ ಜನರಿಗೆ ಅಪೂರ್ವ ಲಾವಕ್ಕಿಭೋಜನ ಸಿದ್ಧಿ ಮಾಡಿದಿರಿ ಅವರ ಹಸಿವು ಬಯಕೆಗಳ ಇಂಗಿಸಲಿಕೆ.
3 : ಶತ್ರುಗಳು ಹಸಿದಿದ್ದಾಗ ಕಳುಹಿಸಲಾದ ಅಸಹ್ಯಪ್ರಾಣಿಗಳನ್ನು ಕಂಡು ಅಗತ್ಯವಾದ ಅನ್ನವನ್ನು ಕೂಡ ಹೇಸಿಕೊಳ್ಳುವಂತಾಯಿತು! ನಿಮ್ಮ ಜನರು ತುಸುಕಾಲ ಹಸಿದು ಬಳಲಿದರಾದರೂ ಅಪೂರ್ವ ಆಹಾರವನ್ನು ಊಟ ಮಾಡುವಂತಾಯಿತು.
4 : ಆ ಹಿಂಸಕರು ಕಠಿಣವಾದ ಕೊರತೆಯನ್ನು ಅನುಭವಿಸುವುದು ಉಚಿತವಾಗಿತ್ತು ಶತ್ರುಗಳಿಗಾದ ಸಂಕಟವನು ನಿಮ್ಮವರಿಗೆ ತೋರಿಸುವುದು ಮಾತ್ರ ಬೇಕಾಗಿತ್ತು.
5 : ಭೀಕರ ಕಾಡುಮೃಗಗಳು ನಿಮ್ಮವರ ಮೇಲೆ ಎರಗಿಬಂದಾಗಲು ಕೆಟ್ಟ ಹಾವುಗಳ ಕಡಿತದಿಂದ ಇವರು ನಾಶವಾಗುತ್ತಿದ್ದಾಗಲು ನಿಮ್ಮ ಕೋಪಾವೇಶವು ಉಳಿಯಲಿಲ್ಲ ಕೊನೆಯವರೆಗು.
6 : ಬುದ್ಧಿ ಕಲಿಯುವ ಸಲುವಾಗಿ, ವಿಧಿನಿಯಮಗಳನು ನೆನಪಿನಲ್ಲಿಡುವುದಕ್ಕಾಗಿ, ರಕ್ಷಣೆಯ ಗುರುತು ದೊರಕಲಿಕ್ಕಾಗಿ, ಇವರು ಸಂಕಟಪಟ್ಟರು ತಾತ್ಕಾಲಿಕವಾಗಿ.
7 : ಇವರ ಪ್ರಾಣ ರಕ್ಷಣೆಯಾದುದು ಆ ಗುರುತನು ನೋಡಿದ್ದರಿಂದಲ್ಲ ಅದು ಸಾಧ್ಯವಾಯಿತು ಸರ್ವರ ಉದ್ಧಾರಕನಾದ ನಿಮ್ಮಿಂದ.
8 : ಹೀಗೆ ಸಕಲ ಕೇಡುಗಳಿಂದ ಬಿಡಿಸುವಾತ ನೀವೇ ಎಂದು ನಮ್ಮ ಶತ್ರುಗಳಿಗೆ ಮಾಡಿಕೊಟ್ಟಿರಿ ಮನದಟ್ಟು.
9 : ಅವರನು ಕಡಿದುಕೊಂದವು ಮಿಡಿತೆ ಹಾಗು ನೊಣಗಳು ಅವರ ಪ್ರಾಣವನ್ನುಳಿಸಲು ಯಾವ ಸಾಧನವೂ ಇಲ್ಲವಾಯಿತು. ಕಾರಣ – ಅಂತಹ ಶಿಕ್ಷೆಗೆ ಅವರು ಪಾತ್ರರಾಗಿದ್ದರು.
10 : ನಿಮ್ಮ ಮಕ್ಕಳಿಗಾದರೋ ಸೋಲು ಸಂಭವಿಸಲಿಲ್ಲ ವಿಷಸರ್ಪಗಳ ಹಲ್ಲಿಂದ ಅವರು ಗುಣಹೊಂದಿದರು, ನಿಮ್ಮ ದಯೆ ಅವರಿಗೆ ಆಧಾರವಾಗಿದ್ದುದರಿಂದ.
11 : ಕಡಿತಕ್ಕೆ ಗುರಿಯಾದರು ನಿಮ್ಮಾಜ್ಞೆಗಳನು ನೆನಪಿನಲ್ಲಿಟ್ಟುಕೊಳ್ಳಲೆಂದು ಬೇಗನೆ ಗುಣವಾದರು ನಿಮ್ಮನ್ನು ಪೂರ್ತಿ ಮರೆತುಹೋಗಬಾರದೆಂದು ನಿಮ್ಮ ಕಾರುಣ್ಯದಿಂದ ಅವರು ದೂರವಾಗಬಾರದೆಂದು.
12 : ಅವರು ಗುಣಹೊಂದಿದ್ದು ಯಾವುದೋ ಗಿಡಮೂಲಿಕೆಯಿಂದಲ್ಲ ಮೆತ್ತಗೆ ಮಾಡುವಂಥ ಯಾವುದೋ ಮುಲಾಮಿನಿಂದಲ್ಲ. ಅದಾಯಿತು ಹೇ ಸರ್ವೇಶ್ವರಾ, ಎಲ್ಲವನ್ನು ಸ್ವಸ್ಥವಾಗಿಸುವ ನಿಮ್ಮ ವಾಕ್ಯದಿಂದ.
13 : ಸಾವು ಜೀವಗಳ ಮೇಲೆ ನಿಮಗುಂಟು ಅಧಿಕಾರ ನೀವೇ ಪಾತಾಳದ ದ್ವಾರಗಳ ಬಳಿಗೆ ನಡೆಸುವಾತ ನೀವೇ ಅಲ್ಲಿಂದ ಮೇಲಕ್ಕೆ ಕರೆದು ತರುವಾತ.
14 : ದುಷ್ಟತನದಿಂದ ಕೊಲೆಮಾಡಬಹುದು ಮನುಜ ಹೊರಟುಹೋದ ಜೀವಾತ್ಮವನ್ನಾತ ಹಿಂದಿರುಗಿಸಲಾರ ಪಾತಾಳ ಸೇರಿದ ಪ್ರಾಣವನ್ನು ಬಿಡಿಸಿ ತರಲಾರ.
15 : ಆದರೂ ದೇವಾ, ನಿಮ್ಮ ಕೈಯಿಂದ ತಪ್ಪಿಸಿಕೊಳ್ಳಲಾಗದಯ್ಯಾ !
16 : ದುರುಳರು ನಿಮ್ಮನು ಅಂಗೀಕರಿಸಲಿಲ್ಲ ದೇವರೆಂದು ನಿಮ್ಮ ಭುಜಬಲದಿಂದ ಅವರು ಹಿಂಸೆಗೀಡಾದರಂದು. ಅಸಾಧಾರಣ ಮಳೆ, ಪ್ರಚಂಡ ಮಾರುತ, ಆಲಿಕಲ್ಲು, ಇವು ಅವರನು ಬೆನ್ನಟ್ಟಿಕೊಂಡು ಹೋದವು ಬೆಂಕಿ ಅವರನು ಪೂರ್ತಿಯಾಗಿ ದಹಿಸಿಬಿಟ್ಟಿತು.
17 : ಅತಿಶಯವೆಂದರೆ – ಎಲ್ಲವನು ನಂದಿಸುವ ನೀರಲ್ಲೆ ಅಗ್ನಿ ಪ್ರಬಲವಾದುದು ಅಂತೆಯೇ ಸಜ್ಜನರ ಪರವಾಗಿ ಲೋಕವಿಡೀ ಹೋರಾಡುವುದು ಸಹಜ.
18 : ಒಮ್ಮೆ, ದುರುಳರ ವಿರುದ್ಧ ಕಳುಹಿಸಲಾದ ಮೃಗಗಳನ್ನು ಅಗ್ನಿ ಸುಡದೆ ಶಮನವಾಯಿತು. ಇದನ್ನು ಕಂಡವರು ದೇವರ ದಂಡನಾ ತೀರ್ಪು ತಮ್ಮನ್ನು ಬೆನ್ನಟ್ಟಿದೆಯೆಂದು ಅರಿವಂತಾಯಿತು.
19 : ಇನ್ನೊಮ್ಮೆ, ದುರುಳರ ಹೊಲಗಳಲ್ಲಿದ್ದ ಪೈರುಗಳನ್ನು ನಾಶಮಾಡಲು ನೀರಿನಲ್ಲೂ ಅಗ್ನಿ ತನ್ನ ಶಕ್ತಿಗಿಂತ ಮಿಗಿಲಾಗಿ ಉರಿಯಿತು.
20 : ನಿಮ್ಮ ಜನರಿಗಾದರೋ, ದೇವದೂತರ ಆಹಾರವನ್ನು ಬಡಿಸಿದಿರಿ; ಶ್ರಮವಿಲ್ಲದೆ ಸಿದ್ಧವಾದ, ರುಚಿಕರವಾದ, ಎಲ್ಲರಿಗು ಒಗ್ಗುವಂಥ ರೊಟ್ಟಿಯನ್ನು ನೀವವರಿಗೆ ಪರಲೋಕದಿಂದ ಕೊಟ್ಟಿರಿ.
21 : ನೀವಿತ್ತ ಪದಾರ್ಥ ವ್ಯಕ್ತಪಡಿಸಿತು ನಿಮ್ಮ ಮಕ್ಕಳ ಬಗ್ಗೆ ನಿಮಗಿದ್ದ ವಾತ್ಸಲ್ಯವನು ತಿನ್ನುವವನ ಬಯಕೆಯನು ಅದು ಪೂರೈಸುತ್ತಾ ಅವನವನ ಇಷ್ಟದಂತೆ ಹದಗೊಳ್ಳುತ್ತಿತ್ತು.
22 : ಹಿಮ, ನೀರುಗಡ್ಡೆಗಳು ಬೆಂಕಿಯ ಬೇಗೆಗೆ ಕರಗದೆ ಹೋದವು ಹೀಗೆ ಶತ್ರುಗಳ ಬೆಳೆ ನಾಶಮಾಡಲು ಚಂಡಮಾರುತದಲ್ಲೂ ಬೆಂಕಿ ಉರಿಯಬಲ್ಲದು ಮಳೆಯಲ್ಲೂ ಅದು ಸುಡಬಲ್ಲದು ಎಂದು ಅವರು ತಿಳಿದುಕೊಳ್ಳುವಂತಾಯಿತು.
23 : ಸಜ್ಜನರಿಗಾದರೋ ಆಹಾರ ಒದಗಿಸಲು ಅಗ್ನಿ ತನ್ನ ಸಹಜ ಗುಣವನೇ ಮರೆತುಬಿಟ್ಟಿತು !
24 : ತನ್ನ ಸರ್ವೇಶ್ವರನಾದ ನಿಮಗೆ ಸೇವೆ ಸಲ್ಲಿಸುವ ಸೃಷ್ಟಿಯು ದುರ್ಜನರನು ದಂಡಿಸಲು ಬಹಳ ತವಕಪಡುವುದು ನಿಮ್ಮ ವಿಶ್ವಾಸಿಗಳಿಗೆ ಒಳಿತಾಗುವಂತೆ ತಡೆದುಕೊಳ್ಳುವುದು.
25 : ಎಂತಲೇ, ನಿಮ್ಮನು ಬೇಡುವವರ ಬಯಕೆ ನೆರವೇರಿಸಲು ಆ ಆಹಾರ ನಾನಾ ರೂಪ ತಾಳಿತು, ಸರ್ವವನೂ ಪೋಷಿಸುವ ನಿಮ್ಮ ದಯೆಗದು ಸಾಧ್ಯವಾಯಿತು.
26 : ಹೇ ಸರ್ವೇಶ್ವರಾ, ಮಾನವನನು ಪೋಷಿಸು ವುದು ಭೂಫಲಗಳ ಬೆಳೆಗಳಲ್ಲ. ನಿಮ್ಮ ವಿಶ್ವಾಸಿಗಳನು ಉಳಿಸುವುದು ನಿಮ್ಮ ವಾಕ್ಯ ಇದನು ಕಲಿತುಕೊಳ್ಳುವಂತಾಯಿತು ನೀವು ಪ್ರೀತಿಸುವ ಸಂತಾನ.
27 : ಬೆಂಕಿಯಿಂದ ಸುಟ್ಟು ನಾಶವಾಗದ ಆಹಾರ ಕಾಯ್ದು ಕರಗಿಹೋಯಿತು ಸೂರ್ಯನ ಸೌಮ್ಯಕಿರಣ ಮಾತ್ರದಿಂದ.
28 : ಇದರಿಂದ ನಾವು ಅರಿತುಕೊಳ್ಳಬೇಕಾದ ಪಾಠವಿದು: ಸೂರ್ಯೋದಯಕ್ಕೆ ಮೊದಲೇ ನಾವೆದ್ದು ಸ್ತುತಿಸಬೇಕು ನಿಮ್ಮನು ಬೆಳಕು ಮೂಡುತ್ತಿರುವಾಗಲೆ ನಾವು ಬೇಡಿಕೊಳ್ಳಬೇಕು ನಿಮ್ಮನು.
29 : ಹೌದು, ಕರಗಿಹೋಗುವುದು ಚಳಿಗಾಲದ ಬಿಳಿಮಂಜಿನ ಹನಿಯಂತೆ ಹರಿದುಹೋಗುವುದು ಪ್ರಯೋಜನವಿಲ್ಲದ ನೀರಿನಂತೆ ಉಪಕಾರಸ್ಮರಣೆ ಮಾಡದವನ ನಂಬಿಕೆ ನಿರೀಕ್ಷೆ. ಕಾರ್ಗತ್ತಲು

Holydivine