Wisdom - Chapter 12
Holy Bible

1 : ಅಮರವಾದ ನಿಮ್ಮ ಚೈತನ್ಯವು ಇರುವುದು ಪ್ರತಿಯೊಂದರಲ್ಲೂ.
2 : ಎಂದೇ ಸನ್ಮಾರ್ಗದಿಂದ ತಪ್ಪಿಹೋದವರನು ಸ್ವಲ್ಪಸ್ವಲ್ಪವಾಗಿ ತಿದ್ದುತ್ತೀರಿ ಮಾಡಿದ ಅಪರಾಧಗಳನು ನೆನಪಿಗೆ ತಂದುಕೊಟ್ಟು ಎಚ್ಚರಿಸುತ್ತೀರಿ. ಸರ್ವೇಶ್ವರಾ, ದುಷ್ಟತನ ಬಿಟ್ಟು ನಿಮ್ಮನ್ನವರು ನಂಬಲೆಂದೇ ಹೀಗೆ ಮಾಡುತ್ತೀರಿ. ಆದಿ ಕಾನಾನ್ಯರ ಅಕ್ರಮ
3 : ಹೇ ಸರ್ವೇಶ್ವರಾ, ನೀವು ಬೇಸರಗೊಂಡಿರಿ ನಿಮ್ಮ ಪೂಜ್ಯನಾಡಿನ ಪೂರ್ವನಿವಾಸಿಗಳ ವಿಷಯದಲಿ.
4 : ಮಾಯಮಾಟ; ಅಶುದ್ಧ ಆಚಾರ ನಿರ್ದಯವಾದ ಶಿಶುಹತ್ಯೆ, ನರಬಲಿ, ರಕ್ತಮಾಂಸ ಭೋಜನ ಇಂಥ ಹೇಯ ಕೃತ್ಯಗಳನ್ನೆಲ್ಲ ಅವರು ನಡೆಸಿದರಲ್ಲಾ !
6 : ಅಸಹ್ಯವಾದ ಅನ್ಯಮತಕೆ ದೀಕ್ಷೆ ಹೊಂದಿದವರ ಹಾಗೆ ಬಲಿಕೊಡುತ್ತಿದ್ದರವರು ತಮ್ಮ ಸ್ವಂತ ಮಕ್ಕಳನೆ.
7 : ಇವರು ನಿರ್ಮೂಲರಾದರು ನಮ್ಮ ಪೂರ್ವಜರ ಕೈಯಿಂದ ನಿಮ್ಮೊಲವಿನಾ ನಾಡು, ದೇವಜನರ ನಿವಾಸವಾಗಬೇಕೆಂದೆ ನಿಮ್ಮ ಸಂಕಲ್ಪ.
8 : ಆದರೂ, ಮನುಷ್ಯರಾದ ಅವರು ಕ್ರಮೇಣ ನಾಶವಾಗಲೆಂದು ನಿಮ್ಮ ಸೈನ್ಯದ ಮುಂದಾಗಿ ಕಳುಹಿಸಿದಿರಿ ಕಣಜದ ಹುಳುಗಳನು.
9 : ದುರ್ಜನರನು ಸಜ್ಜನರ ಕೈಯಿಂದ ಯುದ್ಧದಲಿ ನೀವು ಸದೆಬಡಿಯಬಹುದಿತ್ತು ಉಗ್ರಮೃಗಗಳಿಂದ, ಒಂದೇ ಬಿರುನುಡಿ ಯಿಂದ ಸಾಯಿಸಬಹುದಿತ್ತು.
10 : ಆದರೆ ಕ್ರಮೇಣ ದಂಡನೆಯಿಂದ ಪಶ್ವಾತ್ತಾಪಪಡಲು ಸದವಕಾಶ ನೀಡಿದಿರಿ. ಹುಟ್ಟಿನಿಂದ ಕೆಟ್ಟವರು, ದುಷ್ಟಗುಣ ಉಳ್ಳವರು, ಬಗ್ಗದ ಹಠಮಾರಿಗಳೆಂದು ಅರಿತಿದ್ದೀರಿ.
11 : ಅವರ ಸಂತಾನ ಆದಿಯಿಂದ ಶಾಪಗ್ರಸ್ತ ಅವರಿಗೆ ಕ್ಷಮೆ ನೀಡುತ್ತಾ ಬಂದುದು ಭಯದಿಂದೇನೂ ಅಲ್ಲ. ದೇವರ ಸಹನೆಗೆ ಕಾರಣ
12 : ಏನು ಮಾಡಿರುವೆ? ಎಂದು ನಿಮ್ಮನ್ನು ಯಾವನು ಕೇಳಿಯಾನು? ನಿಮ್ಮ ತೀರ್ಪನು ಕುರಿತು ಯಾರು ತಾನೆ ಪ್ರತಿಭಟಿಸಿಯಾನು? ನೀನೆ ಸೃಷ್ಟಿಸಿದ ಜನಾಂಗವನ್ನೇಕೆ ನಾಶ ಮಾಡಿದೆ ಎಂದು ದೂರುವವನಾರು? ದುಷ್ಟರ ಪರವಾಗಿ ನಿಂತು ಮುಯ್ಯಿ ತೀರಿಸಲು ನಿಮ್ಮ ಮುಂದೆ ನಿಲ್ಲಬಲ್ಲವನಾರು?
13 : ಸರ್ವಜನರ ಸುಖ ಕೋರುವ ದೇವರು ನೀವಲ್ಲದೆ ಇನ್ನಾರೂ ಇಲ್ಲ. ನೀವು ವಿಧಿಸಿದ ದಂಡನೆ ಅನ್ಯಾಯವಲ್ಲ ಎಂದು ನೀವು ತೋರಿಸಬೇಕಾಗಿಲ್ಲ.
14 : ನೀವು ಶಿಕ್ಷಿಸಿದವರ ಪಕ್ಷವಹಿಸಿ ನಿಲ್ಲತಕ್ಕವನಿಲ್ಲ ಅರಸನಾಗಲಿ, ದೊರೆಯಾಗಲಿ, ಯಾರೂ ಇಲ್ಲ.
15 : ನ್ಯಾಯಸ್ವರೂಪಿಯಾದ ನೀವು ಸರ್ವ ವನೂ ನ್ಯಾಯವಾಗಿಯೆ ಆಳುತ್ತೀರಿ. ನಿರಪರಾಧಿಯನು ಅಪರಾಧಿಯೆಂದು ದಂಡಿಸುವುದು ಅಯೋಗ್ಯ ಎಂದರಿತಿದ್ದೀರಿ.
16 : ನಿಮ್ಮ ಶಕ್ತಿಯೇ ನ್ಯಾಯನೀತಿಗೆ ಆಧಾರ ನಿಮ್ಮ ಸಾರ್ವಭೌಮತ್ವವೇ ಎಲ್ಲ ಸಹನೆಗೆ ಮೂಲ ಕಾರಣ.
17 : ನೀವು ಸರ್ವಶಕ್ತರೆಂದು ಜನರು ನಂಬದಿರುವಾಗ ನೀವು ಶಕ್ತಿಯನ್ನು ತೋರಿಸುತ್ತೀರಿ; ಅದನು ಬಲ್ಲವರೊಂದಿಗೆ ವರ್ತಿಸುವಾಗ ಅವರ ಉದ್ಧಟತನವನ್ನು ಖಂಡಿಸುತ್ತೀರಿ.
18 : ಶಕ್ತಿಯಲ್ಲಿ ನೀವೇ ಸಾರ್ವಭೌಮ ಎಂದೇ, ತೀರ್ಪಿಡುತ್ತೀರಿ ಸಾಮ್ಯತೆಯಿಂದ ನಮ್ಮನ್ನಾಳುತ್ತೀರಿ ಬಹು ತಾಳ್ಮೆಯಿಂದ ನಿಮ್ಮ ಶಕ್ತಿ ನಿಮ್ಮಲ್ಲಿದೆ ಇಚ್ಛಿಸಿದಾಗಲೆಲ್ಲ
19 : ಇಂಥ ಕಾರ್ಯಗಳಿಂದ ಸಜ್ಜನನು ಜನಪ್ರಿಯ ನಾಗಿರಲು ಕಲಿಸಿಕೊಟ್ಟಿರುವಿರಿ ಪಾಪಗಳಿಗೆ ಪಶ್ಚಾತ್ತಾಪದ ಅವಕಾಶವಿತ್ತು ನಿಮ್ಮ ಮಕ್ಕಳನು ಭರವಸೆಯುಳ್ಳವರಾಗಿಸಿದಿರಿ.
20 : ನಿಮ್ಮ ಮಕ್ಕಳ ಶತ್ರುಗಳನ್ನು ಶಿಕ್ಷಿಸಿದಿರಿ ಸಾವಧಾನದಿಂದ, ತಾಳ್ಮೆಯಿಂದ. ಮರಣದಂಡನೆಗೆ ಅರ್ಹರಾಗಿದ್ದರೂ ಪಶ್ವಾತ್ತಾಪಕೆ ಅವರಿಗಿತ್ತಿರಿ ಕಾಲಾವಕಾಶ.
21 : ಇಂತಿರಲು ನಿಮ್ಮ ಮಕ್ಕಳ ನ್ಯಾಯವನು ನಿರ್ಣಯಿಸಿದಿರಿ ಎಷ್ಟೋ ಜಾಗ್ರತೆಯಿಂದ ಅವರ ಪಿತೃಗಳೊಂದಿಗೆ ಮಾಡಿದಿರಿ ದೃಢ ಒಪ್ಪಂದ, ಇತ್ತಿರಲ್ಲವೆ ಸೌಭಾಗ್ಯದ ವಾಗ್ದಾನ?
22 : ಹೌದು, ಶಿಕ್ಷಿಸುತ್ತೀರಿ ನೀವು ನಮ್ಮನು, ಆದರೆ ಸಾವಿರ ಪಾಲು ಹೆಚ್ಚಾಗಿ ದಂಡಿಸುತ್ತೀರಿ ವೈರಿಗಳನು. ನಾವು ತೀರ್ಪಿಡುವಾಗ ಮನದಲ್ಲಿಡಬೇಕು ನಿಮ್ಮ ಒಳ್ಳೆಯತನವನು ನಾವೇ ತೀರ್ಪಿಗೊಳಗಾದಾಗ ನಿರೀಕ್ಷಿಸಬೇಕು ನಿಮ್ಮ ಕರುಣೆಯನು. ಕ್ರಮೇಣ ಈಜಿಪ್ಟರಿಗಾದ ದಂಡನೆ
23 : ಮಂದಮತಿಯಿಂದ ದುರುಳರು ನಡೆಸಿದರು ದುಂದು ಜೀವನವನೆ ಬಾಧಿಸಿದಿರಿ ನೀವು ಅವರನು ಅವರ ಹೇಯಕೃತ್ಯಗಳಿಂದಲೆ.
24 : ತಪ್ಪುದಾರಿಯಲ್ಲಿ ಅವರು ನಡೆದರು ಬಹುದೂರ ದೇವರನ್ನಾಗಿಸಿಕೊಂಡರು, ವೈರಿಗಳಿಗೂ ಹೇಯವಾದ ಪ್ರಾಣಿಗಳನು, ಮೋಸಹೋದರು ಬುದ್ಧಿಯಿಲ್ಲದ ಚಿಕ್ಕಮಕ್ಕಳ ಪರಿಯೊಳು.
25 : ಆದುದರಿಂದ ಆ ತಿಳಿಗೇಡಿ ಮಕ್ಕಳಿಗೆ ಕೊಟ್ಟಿರಿ ನೀವು ಹುಸಿಪೆಟ್ಟನು.
26 : ಮಕ್ಕಳಿಗೆ ಕೊಡುವ ಆ ತಿದ್ದುಪಾಟಿನಿಂದ ಬುದ್ಧಿಕಲಿಯದವರು ದೇವರಿಂದ ಬರುವ ಕಠಿಣ ದಂಡನೆಗೆ ಗುರಿಯಾಗುವರು.
27 : ದೇವರುಗಳೆಂದುಕೊಂಡ ಪ್ರಾಣಿಗಳ ಮೂಲಕ ಕಷ್ಟಕ್ಕೀಡಾಗಿ ಕುಪಿತಗೊಂಡರು ಈವರೆಗೆ ದೇವರೆಂದು ನಿರಾಕರಿಸಿದ ತಮ್ಮನೆ ಸತ್ಯದೇವನೆಂದು ಗುರುತಿಸಿದರು. ಈ ಕಾರಣವೇ ಎರಗಿತು ಅವರ ಮೇಲೆ ಕಟ್ಟಕಡೆಯ ಘೋರ ದಂಡನೆ.

Holydivine